ಒಳಮೀಸಲಾತಿ ಜಾರಿ ವಿಜಯೋತ್ಸವ ಮತ್ತು ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮಕ್ಕೆ ಬನ್ನಿ – ಎಂ.ದುರ್ಗೇಶ್ ಪೂಜಾರ್
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಭರಮಸಾಗರ:
ಮಾದಿಗ ಸಮುದಾಯಕ್ಕೆ ನ್ಯಾಯವಾಗಿ ಬರಬೇಕಾಗಿದ್ದ ಮೀಸಲಾತಿಯ ಪ್ರಮಾಣವನ್ನು ಹಿಂದುಳಿಯುವಿಕೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಮಾದಿಗರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಕಳೆದ 35 ವರ್ಷಗಳಿಂದ ನಡೆಸಿದ ಹೋರಾಟದ ಫಲವಾಗಿ ಮತ್ತು ಘನ ಸರ್ವೋಚ್ಚ ನ್ಯಾಯಾಲವು ದಿನಾಂಕ -1 – 8- 2024 ರಂದು ಐತಿಹಾಸಿಕ ತೀರ್ಪು ನೀಡಿ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಕ್ಕೆ ನೀಡಿದ
ಪರಿಣಾಮ ಸಾಮಾಜಿಕ ನ್ಯಾಯದ ಹರಿಕಾರ ಜನ ಮೆಚ್ಚಿದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಿನಾಂಕ 19.08.2025 ರಂದು ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದ
ಮಾದಿಗ ಸಮುದಾಯಕ್ಕೆ ಗುಂಪು ಮಾಡಿ ಶೇಕಡ 6% ಒಳ ಮೀಸಲಾತಿಯನ್ನು ಜಾರಿಗೊಳಿಸಿದ ಈ ಶುಭ ಸಂದರ್ಭದಲ್ಲಿ
*ಕರ್ನಾಟಕ ಸರ್ಕಾರಕ್ಕೆ ಮತ್ತು ಒಳ ಮೀಸಲಾತಿ ಹೋರಾಟದ ರೂವಾರಿ ಮಾದಿಗ ಜನಾಂಗದ ಕಣ್ಮಣಿ ಮಾಜಿ ಸಚಿವರಾದ ಆಂಜನೇಯ ಇವರಿಗೆ ಹೃದಯ ತುಂಬಿ ಹರಸಿ ಅಭಿನಂದಸಿ ವಿಜಯೋತ್ಸವ ಆಚರಿಸಲು ಅದ್ದೂರಿಯಾದ ಸಮಾರಂಭವನ್ನುಭರಮಸಾಗರದಲ್ಲಿ ಹಮ್ಮಿಕೊಂಡಿದ್ದೇವೆ*,ಈ ಸಮಾರಂಭ ದಲ್ಲಿ ಡಿ, ಸುಧಾಕರ್, ಶಾಸಕರುಗಳಾದ ರಘುಮೂರ್ತಿ, ಬಸವoತಪ್ಪ ದೇವoದ್ರಪ್ಪ ಬಸವoತಪ್ಪ,ಮಾಜಿ ಸಂಸದ ದರಾದಬಿ ಎನ್ ಚಂದ್ರಪ್ಪ ಆದ್ದರಿಂದ ನಿಗಮ ಮಂಡಳಿ ಅಧ್ಯಕ್ಷ ರಾದ ಜಿ ಎಸ್ ಮಂಜುನಾಥ್ ಹೆಚ್ ಎನ್ ತಿಪ್ಪೇಸ್ವಾಮಿ ಕೃಷ್ಣ ಮೂರ್ತಿ ಲಿಂಗವ್ವನಾಗತಿ ಹಳ್ಳಿ ತಿಪ್ಪೇಸ್ವಾಮಿ ಬ್ಲಾಕ್ ಅಧ್ಯಕ್ಷರುಗಳು ಆಗಮಿಸಲಿದ್ದಾರೆ. ಭರಮಸಾಗರದಲ್ಲಿ ದಿನಾಂಕ -14-9-2025ರ ಭಾನುವಾರ ಬೆಳಿಗ್ಗೆ 10:30 ಕ್ಕೆ ಹೆಚ್ ಆಂಜನೇಯ ಅಭಿಮಾನಿ ಬಳಗದ ವತಿಯಿಂದ ಒಳ ಮೀಸಲಾತಿ ಜಾರಿ ವಿಜಯೋತ್ಸವ ಹಾಗೂ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ,
ಈ ಕಾರ್ಯಕ್ರಮಕ್ಕೆ ಹೆಚ್ ಆಂಜನೇಯ
ಅಭಿಮಾನಿಗಳು,ನಾಗರಿಕರು,ರೈತರು,ಪ್ರಗತಿಪರ ಚಿಂತಕರು, ಎಲ್ಲರೂ ಈ ಸಮಾರಂಭದಲ್ಲಿ ಹೆಚ್ಚಿನದಾಗಿ ಭಾಗವಹಿಸಲು ಕೋರುತ್ತೇನೆ .
ಎಂ.ದುರ್ಗೇಶ್ ಪೂಜಾರ್
ಮಾಜಿ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಸಮಿತಿ ಭರಮಸಾಗರ.
