ನಕಲಿ ಚಿನ್ನ ಮಾರಾಟದ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ತಳಕು ಪೊಲೀಸರು ಯಶಸ್ವಿ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಳ್ಳಕೆರೆ:
ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ಮಾರಾಟ ಮಾಡಿ ಮೋಸ ಮಾಡುತ್ತಿದ್ದ ಆರೋಪಿಗಳನ್ನು ತಳಕು ಪೊಲೀಸರು ಯಶಸ್ವಿಯಾಗಿ ಬಂಧಿಸಿ ಬಂಧಿತರಿಂದ 27,77 ಲಕ್ಷ ರೂ ಹಣ, 01 ಮೋಟಾರ್ ಸೈಕಲ್ ವಶ ಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂತರ್ ಜಿಲ್ಲಾ ಕಳ್ಳರು ತಮಿಳುನಾಡು ರಾಜ್ಯದ ವೆಲ್ಡನ್ ಎಂಬ ವ್ಯಕ್ತಿಗೆ ಮೊಬೈಲ್ ಮೂಲಕ ಕರೆ ಮಾಡಿ ನಮ್ಮ ಮನೆ ಬುನಾದಿ ತೆಗೆಯುವಾಗ ನಿಧಿ ಸಿಕ್ಕಿದೆ ಸ್ಥಳೀಯವಾಗಿ ಮಾರಾಟ ಮಾಡಲು ತೊಂದರೆ ಇದ್ದು. ನಿಮಗೆ ಕಡಿಮೆ ಬೆಲೆಗೆ ಚಿನ್ನ ಮಾರಾಟ ಮಾಡುವುದಾಗಿ ನಂಬಿಸಿ ಅಸಲಿ ಚಿನ್ನದ ನಾಣ್ಯಗಳನ್ನು 7-8 ಜನ ಹಿರೇಹಳ್ಳಿ ಗ್ರಾಮದ ಚಿಕ್ಕಹಳ್ಳಿ ಗೇಟ್ ಗೆ ಕರೆಯಿಸಿಕೊಂಡು ಅಸಲಿ ಚಿನ್ನವನ್ನು ಕೊಡುವುದಾಗಿ ಸ್ಯಾಂಪಲ್ ಕೊಟ್ಟು ನಂಬಿಸಿ ನಕಲಿ ಚಿನ್ನವನ್ನು ಕೊಟ್ಟು 30 ಲಕ್ಷ ರೂಪಾಯಿ ನಗದು ಹಣವನ್ನು ಪಡೆದು ಮೋಸ ಮಾಡಿರುವುದಾಗಿ ಅಕ್ಟೋಬರ್ 07 ರಂದು ನೀಡಿದ ದೂರಿನ ಮೇರೆಗೆ ತಳಕು ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿನ ಆರೋಪಿತರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧಿಕ್ಷಕರವರಾದ ರಂಜಿತ್ ಕುಮಾರ ಭಂಡಾರು, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಆರ್ ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ಸತ್ಯನಾರಾಯಣ ರಾವ್ ಪೊಲೀಸ್ ಉಪಾಧೀಕ್ಷಕರು, ಚಳ್ಳಕೆರೆ ಉಪವಿಭಾಗ ರವರ ನಿರ್ದೇಶನದಲ್ಲಿ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳಾದ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಯಲ್ಲಾಪುರ ಗ್ರಾಮದ , 30 ವರ್ಷದ ಅರವಿಂದಕುಮಾರ,ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ 39 ವರ್ಷದ ನಾಗಪ್ಪ ಪತ್ತೆ ಹೆಚ್ಚಿ 27,77 ಲಕ್ಷ ರೂಪಾಯಿ ನಗದು ಹಣ ಹಾಗೂ 01 ಮೋಟಾರ್ ಸೈಕಲನ್ನು ವಶ ಪಡಿಸಿಕೊಂಡು ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ಉಳಿದ ಆರೋಪಿತರನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ಹನುಮಂತಪ್ಪ ಎಂ ಶಿರೀಹಳ್ಳಿ ,ಪಿ.ಎಸ್.ಐ ಶಿವಕುಮಾರ ಕೆ, ಪ್ರೋ.ಪಿ.ಎಸ್.ಐ ಚೇತನ್, ಎ.ಎಸ್.ಐ ಮಂಜಣ್ಣ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ರವರುಗಳಾದ ನಿತಿನ್ ಕುಮಾರ್, ಮಂಜುನಾಥ, ಧನಂಜಯ, ಜಾಕೀರ್ ಹುಸೇನ್, ಬಸವರಾಜ್, ಚಂದ್ರಶೇಖರ್, ಪಿಸಿ ರವರುಗಳಾದ ನಾರಾಯಣ, ಉಮೇಶ್, ಜಗದೀಶ್, ಗಿರೀಶ್, ಮಂಜುನಾಥ, ಪುರುಷೋತ್ತಮ್, ವೀರೇಶ, ಮಾರೇಶ, ಸಂಗನ ಬಸಪ್ಪ, ದಿನೇಶ, ಬಸವರಾಜ್, ಪ್ರಕಾಶ್ ಇದ್ದರು.
