ಮನುಷ್ಯನಿಂದ ಪ್ರಕೃತಿಗೆ ಹಾನಿಯಾಗದಂತೆ ಜಾಗೃತಿ ವಹಿಸಿ ತ್ರಿನೇತ್ರಾ ಎಂ.ಎನ್
ಚಿತ್ರದುರ್ಗ ಹೊಯ್ಸಳ ಸುದ್ದಿ
ಹೊಸದುರ್ಗ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊಸದುರ್ಗ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಧರ್ಮಸ್ಥಳ ಯೋಜನಾ ಕಛೇರಿ ಸಭಾಂಗಣದಲ್ಲಿ ಭೂಮಿ ದಿನದ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ತ್ರಿನೇತ್ರಾ ಎಂ.ಎನ್. ಅಪರ ಸಿವಿಲ್ ನ್ಯಾಯಾಧೀಶರು
ಚಾಲನೆ ನೀಡಿ ಮಾತನಾಡಿದರು.
ಮನುಷ್ಯರಿಂದ ಮಕ್ಕಳಿಂದ ಪ್ರಕೃತಿ ಹಾನಿಯಾಗದಂತೆ ಜಾಗೃತಿ ವಹಿಸಿಕೊಂಡು ಭೂಮಿಯನ್ನು ರಕ್ಷಣೆ ಮಾಡಿಕೊಂಡು ಹೋದಾಗ ಸ್ವಚ್ಚತೆಯಿಂದ ಇದ್ದಾಗ ಮತ್ತು ಆಧುನಿಕವಾಗಿ ಸಿಗುವ ಕರಿದ ತಿಂಡಿಗಳ ಬ್ಯಗ್ ಗಳು ಪ್ಲಾಸ್ಟಿಕ್ ಕವರ್ಗಳು ಇತ್ಯಾದಿಗಳಿಂದ ಸ್ವಚ್ಛತೆ ಹದಗೆಡುತ್ತಿದ್ದು ನಮ್ಮ ಭೂಮಿಯನ್ನು ನಾವು ರಕ್ಷಣೆ ಮಾಡಲು ಅಗತ್ಯ ವಸ್ತುಗಳ ಕವರ್ ಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಹಾಕುವುದರ ಜೊತೆಗೆ ಯುವ ಪೀಳಿಗೆಯ ಮಕ್ಕಳಿಗೆ ಪ್ರತಿಯೊಬ್ಬರು ಅರಿವನ್ನು ಮೂಡಿಸಬೇಕು ಎಂದು ತಿಳಿಸದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ .ಎಸ್ ವಹಿಸಿ ಮಾತನಾಡಿದ ಅವರು ಭೂಮಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾವಣೆ ಎಂಬ ಪೂಜ್ಯ ವೀರೇಂದ್ರ ಹೆಗ್ಗಡೆಯವರ ನುಡಿದಂತೆ ತಾಲ್ಲೂಕಿನ ಸುಮಾರು 80 ಸಾವಿರ ಕುಟುಂಬಗಳಿಗೆ ಸ್ವಸಹಾಯ ಸಂಘಗಳ ಸಂಘಟನೆ ಮೂಲಕ ಸ್ವಚ್ಛತೆ,ಭೂಮಿಯ ರಕ್ಷಣೆ ಬಗ್ಗೆ ಗ್ರಾಮ ಗ್ರಾಮಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಚ್.ಬಿ.ರವಿಕುಮಾರ್ ಮಾಜಿ ಅಧ್ಯಕ್ಷರು ವಕೀಲರ ಸಂಘ ಮಾತನಾಡಿ ಧರ್ಮಸ್ಥಳ ಸಂಸ್ಥೆಯ ಸಂಘದ ಸದಸ್ಯರಿಗೆ ಕಾನೂನು ಸಲಹೆ ಅವಶ್ಯಕತೆ ಇದ್ದು ಹೆಣ್ಣುಮಕ್ಕಳಲ್ಲಿ ಸಮನತೆ ಇದೆ. ಈ ಸಂಘ ನಮ್ಮ ರಾಜ್ಯದಾದ್ಯಂತ ಸಾಕಷ್ಟು ಹೆಣ್ಣು ಮಕ್ಕಳಲ್ಲಿ ಅನುಕೂಲವಾಗಿದೆ ಈ ಸಂಘದಲ್ಲಿ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನಿಂದ ಕಡಿಮೆ ಬಡ್ಡಿದರದಲ್ಲಿ ಲೋನ್ ನೀಡುವುದರಿಂದ ಅರ್ಥಿಕವಾಗಿ ಬೆಳವಣಿಗೆಯಾಗಿದ್ದಾರೆ.ಭೂಮಿ ವಿಚಾರದಲ್ಲಿ ನಾವು ಬದುಕಿರುವುದು ಭೂಮಿಯ ಮೇಲೆ ಹಾಗಾಗೀ ಭೂಮಿಯನ್ನು ಭೂತಾಯಿ ಎಂದು ಕರೆಯುತ್ತೇವೆ ಭೂಮಿಯನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.
ಈ ವೇಳೆ.ಎ.ಎಲ್.
ಬೋಮಣ್ಣ ಅಧ್ಯಕ್ಷರು ವಕೀಲರ ಸಂಘ ಕೆ.ಟಿ.ಮಮತಾ ಪ್ಯಾನಲ್ ವಕೀಲರು, ಲಲಿತಾ.ಎಂ ಹಿರೇಮಠ್ ಪ್ಯಾನಲ್ ವಕೀಲರು,ಇ.ಟಿ. ರಮೇಶ್ ಮಹಿಳಾ ಕಾನೂನಿನ ಬಗ್ಗೆ ಹರಿವು ಮೂಡಿಸಿದರು.
