ಸಣ್ಣ ಅಂತರದ ಸೋಲಿನ ಹಿಂದೆ ಕಾಣದ “ಕೈ”ಗಳು ದೊಡ್ಡಮಟ್ಟದಲ್ಲಿ ಕೆಲಸ ಮಾಡಿವೆ.
1 min read
ಆಂಜನೇಯರ ಸಣ್ಣ ಅಂತರದ ಸೋಲಿನ ಹಿಂದೆ ಕಾಣದ “ಕೈ”ಗಳು ದೊಡ್ಡಮಟ್ಟದಲ್ಲಿ ಕೆಲಸ ಮಾಡಿವೆ.
ಚಿತ್ರದುರ್ಗ:
ಬಿಜೆಪಿ ಪಕ್ಷ ಸೋತಿದ್ದ ಲಕ್ಷ್ಮಣ ಸವದಿಯವರನ್ನ ಎಂಎಲ್ ಸಿ ಮಾಡಿ ಡಿಸಿಎಂ ಮಾಡುವುದಾದರೇ.ಕಾಂಗ್ರೆಸ್ ಕೂಡ ಈಗ ಸೋತಿರುವ ಆಂಜನೇಯರನ್ನ ಎಂಎಲ್ಸಿ ಮಾಡಿ ಮಂತ್ರಿ ಮಾಡಲು ಸಾಧ್ಯವಿದೆ.
ಏಕೆಂದರೇ ರಾಜ್ಯದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಮಾದಿಗರಿಗೆ ತೀವ್ರ ಅನ್ಯಾಯ ಎಸಗಿದರೂ ಸಹ ಆಂಜನೇಯರ ಮುಖ ನೋಡಿ, ಅವರು ಗೆದ್ದರೇ ಕಾಂಗ್ರೆಸ್ ಸಕಾ೯ರದಲ್ಲಿ ಮತ್ತೆ ಮಂತ್ರಿಯಾಗಿ ಸಮುದಾಯವನ್ನ ಮೇಲೆತ್ತುತಾರೆ ಎಂಬ ಒಂದೇ ಒಂದು ಕಾರಣಕ್ಕೆ,ಮತ್ತು ಬಿಜೆಪಿಯ ಒಳಮೀಸಲಿನ ತೀವ್ರತೆರನಾದ ಆಮಿಷದ ನಡುವೆಯೂ ಬಹುಸಂಖ್ಯಾತರಾದ ಮಾದಿಗರು ಕಾಂಗ್ರೆಸ್ಸನ್ನ ನಿಣಾ೯ಯಕವಾಗಿ ಕೈ ಹಿಡಿದಿದ್ದಾರೆ.
ಒಂದು ವೇಳೆ ಆಂಜನೇಯರು ಸೋತಿದ್ದಾರೆ ಎಂದು ಮೂಲೆಗುಂಪು ಮಾಡಲು ಮುಂದಾದರೇ ಕಾಂಗ್ರೆಸ್ 2024 ರ ಲೋಕಸಭೆಯಲ್ಲಿ ತಕ್ಕ ಬೆಲೆ ತೆರಲಿದೆ.
ಈ ನಡುವೆ ಆಂಜನೇಯರ ಸಣ್ಣ ಅಂತರದ ಸೋಲಿನ ಹಿಂದೆ ‘ಮನಿ’ ಫ್ಯಾಕ್ಟರ್ ಇದ್ದರೂ ಸಹ ಕಾಣದ “ಕೈ”ಗಳು ಸಹ ದೊಡ್ಡಮಟ್ಟದಲ್ಲಿ ಕೆಲಸ ಮಾಡಿವೆ.
ಹೈಕಮಾಂಡ್ ಈ ನಿಟ್ಟಿನಲ್ಲಿ ಮುಂದಾಲೋಚನೆಯಿಂದ ಹೆಜ್ಜೆ ಇಡಬೇಕಿದೆ.ಸಿದ್ದರಾಮಯ್ಯರು, ಡಿ.ಕೆ.ಶಿವಕುಮಾರರು ಈ ಬಗ್ಗೆ ದಿಟ್ಟತನ ತೋರಬೇಕಿದೆ.ಸಹೋದರ ಸಮುದಾಯಗಳು ಸಹ ಮಾದಿಗರ ನೋವಿಗೆ ದನಿಯಾಗಬೇಕಿದೆ.