ವಿದ್ಯೆ ಕಲಿಸಿದ ಶಿಕ್ಷಕರಿಗೆ ನಾವು ಗೌರವಪೂರ್ವಕವಾಗಿರಬೇಕು:ಡಾ: ಶೋಭಾ ಜ್ಞಾನೇಶ್
ಪೂಜ್ಯರು ಮಾಡುವ ಕಾರ್ಯಗಳಿಗೆ ನಮ್ಮಗಳ ಸಹಕಾರ ಸದಾ ಇರುತ್ತದೆ:ಮಮತಾ ಗುರುದೇವ್
ಸಂಪಾದಕರು:ಸಿ.ಎನ್.ಕುಮಾರ್,
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಮೊಳಕಾಲ್ಮೂರು:
ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖ ಮಠದ ಸಿದ್ದಯ್ಯನ ಕೋಟೆಯಲ್ಲಿ ಶ್ರೀ ವಿಜಯ ಮಹಾಂತೇಶ್ವರ ವಿದ್ಯಾಪೀಠ ಇವರ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಜಯಂತಿ ಅಂಗವಾಗಿ ಶಿಕ್ಷಕರ ದಿನಾಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಸಿದ್ದಯ್ಯನ ಕೋಟೆಯ ಪರಮಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಶ್ರೀ ಗಳು ಮಕ್ಕಳಿಗೆ ಉತ್ತಮವಾದಂತಹ ಸಂಸ್ಕಾರ ಶಿಕ್ಷಣ ಪಾಠ ಚಟುವಟಿಕೆಗಳು ಕಲಿಸಲು ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಮಮತಾ ಗುರುದೇವ್ ಉದ್ಯಮಿಗಳು ಬೆಂಗಳೂರು ಇವರು ಮಾತನಾಡಿ ಗಡಿಭಾಗದ ಸಿದ್ದಯ್ಯನ ಕೋಟೆಯಲ್ಲಿ ಪರಮಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು 25 ವರ್ಷಗಳಿಂದನು ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ದಾಸೋಹ ವಸತಿ ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದಾರೆ, ಪರಮಪೂಜ್ಯರು ಕೃಷಿ ಕಾಯಕ ಮಾಡುತ್ತಾ ಕೃಷಿ ಯೋಗಿಯಾಗಿದ್ದಾರೆ, ಪೂಜ್ಯರು ಮಾಡುವ ಕಾರ್ಯಗಳಿಗೆ ನಮ್ಮಗಳ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸವನ್ನು ಮಾಡಿ ಉತ್ತಮವಾದ ಸಂಸ್ಕಾರವನ್ನು ಪಡೆದು ಶಿಕ್ಷಣವಂತರಾಗಿ ಆಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ: ಶೋಭಾ ಜ್ಞಾನೇಶ್ ದಂತ ವೈದ್ಯರು ಮಾತನಾಡುತ್ತಾ ಶಿಕ್ಷಕರು ನಮಗೆಲ್ಲ ಉತ್ತಮ ಶಿಕ್ಷಣ ನೀಡಿದ್ದರಿಂದ ಇಂದು ನಾವುಗಳು ಅಮೆರಿಕದಂತ ದೊಡ್ಡ ದೇಶದಲ್ಲಿ ಉದ್ಯೋಗವನ್ನು ಮಾಡುವಂತಹ ಶಕ್ತಿಯನ್ನು ಪಡೆದುಕೊಂಡಿರುತ್ತೇವೆ, ನಮಗೆ ವಿದ್ಯೆ ಕಲಿಸಿದ ಶಿಕ್ಷಕರಿಗೆ ಈ ದಿನದಂದು ನಾವುಗಳು ಶುಭಾಶಯಗಳು ತಿಳಿಸಿದರ ಜೊತೆಗೆ ಗೌರವಪೂರ್ವಕವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಜೀವ ರತ್ನಮ್ಮ ರವರು ಮಾತನಾಡಿ ಶ್ರೀಗಳ ಕಾರ್ಯ ನೋಡಿ ನಮಗೆ ಬಹಳ ಸಂತೋಷವಾಗಿದೆ ಇಲ್ಲಿರುವ ಶಿಕ್ಷಕರು ಉತ್ತಮವಾದ ಶಿಕ್ಷಣ ಸಂಸ್ಕಾರ ನೀಡುತ್ತಿರುವುದು ನಮಗೆ ತುಂಬಾ ಸಂತೋಷವಾಗಿದೆ ಶ್ರೀಗಳ ಕಾರ್ಯಕ್ಕೆ ಸದಾ ನಮ್ಮ ಸಹಕಾರವಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪ್ರಕಾಶ್ ಶಿಕ್ಷಕರು ದೇವರಹಟ್ಟಿ ಇವರು ಶಿಕ್ಷಕರು ನಿರಂತರವಾಗಿ ಅಭ್ಯಾಸವನ್ನು ಮಾಡಬೇಕು ಹಾಗಾದರೆ ಮಾತ್ರ ನಾವುಗಳು ಮಕ್ಕಳಿಗೆ ಉತ್ತಮವಾದ ಶಿಕ್ಷಣ ಸಂಸ್ಕಾರ ನೀಡಲು ಸಾಧ್ಯ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಶ್ರೀಮಠದ ಕಾರ್ಯದರ್ಶಿ ಪಿಆರ್ ಕಾಂತರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಮಂಜಯ್ಯ, ಕಾಮಯ್ಯ ,ತಿಪ್ಪೇಸ್ವಾಮಿ, ಲೋಕಮ, ರೂಪ, ಕಸ್ತೂರಿ, ನಾಗಮ್ಮ, ಚೇತನ, ಕೊಟ್ರೇಶ್, ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
