ನಿತ್ಯ ವಾಣಿ ಪತ್ರಿಕೆಯ ಸಂಪಾದಕ ನವೀನ್ ಇವರ ಹಿರಿಯ ಸಹೋದರ ನಿಧನ
1 min readನಿತ್ಯ ವಾಣಿ ಪತ್ರಿಕೆಯ ಸಂಪಾದಕ ನವೀನ್ ಇವರ ಹಿರಿಯ ಸಹೋದರ ನಿಧನ
ಚಿತ್ರದುರ್ಗ
ಚಿತ್ರದುರ್ಗ ನಗರದ ಕಣುಮಪ್ಪ ಲೇಔಟ್ ಹತ್ತಿರ ಆಶ್ರಯ ಬಡವಣೆ ಇಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ಇದರ ಪೀಠಾಧಿಪತಿಗಳಾದ ಶ್ರೀ ಮೋಹನಕುಮಾರ ಸ್ವಾಮಿಜೀ ಯವರು, ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಇವರಿಗೆ ಪತ್ನಿ- ಎರಡು ಹೆಣ್ಣು ಮತ್ತು ಒಬ್ಬ ಪುತ್ರನಿದ್ದಾನೆ. ಇವರು ನಿತ್ಯ ವಾಣಿ ಪತ್ರಿಕೆಯ ಸಂಪಾದಕರ ನವೀನ್ ಅವರ ಹಿರಿಯ ಸಹೋದರರಾಗಿದ್ದಾರೆ.
ಭಕ್ತರ ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಐಯುಡಿಪಿ ಬಡಾವಣೆಯಲ್ಲಿನ ಸೂರ್ಯಪುತ್ರ ಸರ್ಕಲ್ ಹತ್ತಿರ ಸಹೋದರ ನವೀನ್ ಅವರ ಮನೆಯ ಬಳಿ ಏರ್ಪಡಿಸಲಾಗಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿಂದೆ.