May 4, 2024

Chitradurga hoysala

Kannada news portal

ಕಿತ್ತೂರು ರಾಣಿ ಚೆನ್ಮಮ್ಮ ಜಯಂತಿಯಲ್ಲಿ ಪ್ರಾಧ್ಯಾಪಕ ಡಾ.ಕೆ.ಚಿದಾನಂದ ರಾಣಿ ಚೆನ್ನಮ್ಮ ಮಹಿಳೆಯರ ಸ್ವಾತಂತ್ರ್ಯದ ಸ್ವಾಭಿಮಾನದ ಸಂಕೇತ

1 min read

 

ಕಿತ್ತೂರು ರಾಣಿ ಚೆನ್ಮಮ್ಮ ಜಯಂತಿಯಲ್ಲಿ ಪ್ರಾಧ್ಯಾಪಕ ಡಾ.ಕೆ.ಚಿದಾನಂದ
ರಾಣಿ ಚೆನ್ನಮ್ಮ ಮಹಿಳೆಯರ ಸ್ವಾತಂತ್ರ್ಯದ ಸ್ವಾಭಿಮಾನದ ಸಂಕೇತ

ಚಿತ್ರದುರ್ಗ:
ಕಿತ್ತೂರು ರಾಣಿ ಚೆನ್ನಮ್ಮ ಭಾರತದ ಮಹಿಳೆಯರ ಸ್ವಾತಂತ್ರ್ಯದ ಸ್ವಾಭಿಮಾನದ ದೊಡ್ಡ ಸಂಕೇತ ಎಂದು ಸರ್ಕಾರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಕೆ.ಚಿದಾನಂದ ಅಭಿಪ್ರಾಯಪಟ್ಟರು.
ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಣಿ ಚೆನ್ನಮ್ಮ ಎಲ್ಲ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದು, ಈ ಸ್ಫೂರ್ತಿಯು ಮಹಿಳಾ ಸಬಲೀಕರಣಕ್ಕೆ ಪೂರಕವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ರಾಣಿ ಚೆನ್ನಮ್ಮ ಅವರು 18ನೇ ಶತಮಾನದಲ್ಲಿಯೇ ಕತ್ತಿವರಸೆ, ಕುದರೆ ಸವಾರಿ, ಮಲ್ಲಯುದ್ಧ ಕಲೆಯನ್ನು ಕಲಿಯುವಂತಹ ಸಾಹಸ ತೋರಿದ ದೇಶಭಕ್ತಿ ಹೊಂದಿದ ಒಬ್ಬ ಮಹಿಳೆ ಎಂಬುದು ಮುಖ್ಯವಾದ ಸಂಗತಿ. ಇಂದಿನ ಆಧುನಿಕ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ಮಹಿಳೆ ಗೇರ್ ಸ್ಕೂಟರ್ ಅನ್ನು ಓಡಿಸುವ ಮಹಿಳೆಯನ್ನು ನೋಡುವ ರೀತಿ ಹೇಗೆ ಇದೆಯೋ ಅದೇ ರೀತಿ 200 ವರ್ಷಗಳ ಹಿಂದೆ ಕುದುರೆ ಸವಾರಿ, ಕತ್ತಿ ವರಸೆ ಕಲೆಯುವ ಸಂದರ್ಭದಲ್ಲಿ ಆಗಿನ ಸಮಾಜದಲ್ಲಿ ಅಷ್ಟೇ ದೊಡ್ಡಮಟ್ಟದ ಹಿನ್ನಡೆ ಇದ್ದರೂ ಅದೆಲ್ಲವನ್ನೂ ಮೀರಿ ಬೆಳೆದಂತಹ ಮಹಿಳೆ ರಾಣಿ ಚೆನ್ಮಮ್ಮ ಎಂದರು.
15ನೇ ವರ್ಷಕ್ಕೆ ಬಾಲ್ಯವಿವಾಹವಾದ ಚೆನ್ಮಮ್ಮ. ಮದುವೆಯಾದ ನಂತರ ಮತ್ತೊಂದು ಸಾಮಾಜಿಕ ವಿಘಟನೆಗೆ ಚೆನ್ನಮ್ಮ ಒಳಗಾಗುತ್ತಾರೆ. ಗಂಡನ ಮರಣ, ಪುತ್ರ ಶೋಕ ಸೇರಿದಂತೆ ಹಲವಾರು ಸವಾಲುಗಳ ನಡುವೆ ವೀರಾಗ್ರಣಿಯಾಗಿ ಚೆನ್ನಮ್ಮ ಹೊರಹೊಮ್ಮಿರುವುದು ಬಹಳಷ್ಟು ಮುಖ್ಯವಾಗುತ್ತಾರೆ ಎಂದು ಹೇಳಿದರು.
ರಾಣಿ ಚೆನ್ನಮ್ಮ ಅವರ ಐತಿಹಾಸಿಕ ದಾಖಲೆಗಳನ್ನು ನೋಡಿದಾಗ ಚೆನ್ನಮ್ಮ ಕೇವಲ ರಾಣಿಯಾಗಿ ಕೆಲಸ ಮಾಡಲಿಲ್ಲ. ಜೊತೆಗೆ ಉತ್ತಮ ಆಡಳಿತಗಾರರಾಗಿ ಕೆಲಸ ನಿರ್ವಹಿಸಿರುವುದನ್ನು ನಾವು ಕಾಣಬಹುದಾಗಿದೆ. ಕತ್ತಿಗಿಂತ ಹೆಚ್ಚಾಗಿ ಪೆನ್ನನ್ನು ಬಳಕೆ ಮಾಡಿರುವುದನ್ನು ಕಾಣಬಹುದು. ಬ್ರಿಟಿಷ್ ಸರ್ಕಾರದ ಜೊತೆ ನಡೆಸಿದ ಪತ್ರವ್ಯವಹಾರಗಳು ಇದಕ್ಕೆ ಸಾಕ್ಷಿಯಾಗಿದೆ. ಪ್ರತಿಯೊಂದು ಮನೆಯಲ್ಲಿಯೂ ರಾಣಿ ಚೆನ್ನಮ್ಮ ಇದ್ದಾರೆ. ಆದರೆ ರಾಣಿ ಚೆನ್ಮಮ್ಮ ಆಗಲಿಕ್ಕೆ ನಮ್ಮ ಸಾಮಾಜಿಕ ವ್ಯವಸ್ಥೆ ಬಿಡುತ್ತಿಲ್ಲ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರು ಆಗಿನ ಕಾಲಘಟ್ಟದಲ್ಲಿ ಮಹಿಳೆಯರು ಸಮಾನವಾಗಿ ಬದುಕಲು ಅವಕಾಶ ಇಲ್ಲದೇ ಇರುವ ಸಂದರ್ಭದಲ್ಲಿ ನಾವು ಯಾರು ಕೂಡ ಕಡಿಮೆ ಇಲ್ಲ ಎಂಬಂತೆ ಕುದುರೆ ಸವಾರಿ, ಕತ್ತಿ ವರಸೆ ತರಬೇತಿ ಸೇರಿದಂತೆ ಯುದ್ಧದ ಅಭ್ಯಾಸ ಮಾಡಿದ್ದರು. ಚೆನ್ನಮ್ಮ ಅವರು ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆಯಾಗಿದ್ದಾರೆ ಎಂದರು.
ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು. ಮಹಿಳೆಯರ ಶೋಷಣೆ ತಡೆಗಟ್ಟಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಟ ಮಾಡುವ ಜೊತೆಗೆ ಚೆನ್ನಮ್ಮ ಅವರ ಆದರ್ಶಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಹೇಳಿದರು.
ವ್ಯಾಪಾರಕ್ಕಾಗಿ ದೇಶಕ್ಕೆ ಆಗಮಿಸಿದ ಬ್ರಿಟಿಷರು ಹಂತ ಹಂತವಾಗಿ ನಮ್ಮ ದೇಶವನ್ನು ಆಳ್ವಿಕೆ ಮಾಡುತ್ತಾ ಹೋದರು. ಚೆನ್ನಮ್ಮ ಅವರ ಧೈರ್ಯ, ಹೋರಾಟದ ಕಿಚ್ಚು ಬ್ರಿಟಿಷರಲ್ಲಿ ಇರಲಿಲ್ಲ. ಬ್ರಿಟಿಷರ ಕುತಂತ್ರಕ್ಕೆ ಚೆನ್ನಮ್ಮ ಬಲಿಯಾದರು. ಆದರೆ ಚೆನ್ನಮ್ಮ ಅವರ ಶೌರ್ಯ, ಸಾಹಸಕ್ಕೆ ಸೋಲಿಲ್ಲ. ಚೆನ್ನಮ್ಮ ಎಂಬ ಹೆಸರಿನಲ್ಲಿಯೇ ಶಕ್ತಿ ಇದೆ. ಶಕ್ತಿಮಾತೆ ಚೆನ್ನಮ್ಮ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಅವರ ತತ್ವ, ಆದಶಗಳನ್ನು ಪಾಲಿಸುವುದರ ಜೊತೆಗೆ ಮುಂದಿನ ಸಮಾಜಕ್ಕೆ ಅವರ ಕೊಡುಗೆಗಳನ್ನು ತಿಳಿಸೋಣ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಮಹೇಶ್, ವೀರಶೈವ ಸಮಾಜ ಕಾರ್ಯದರ್ಶಿ ಎನ್.ಬಿ.ವಿಶ್ವನಾಥ್, ಮಹಿಳಾ ಸಮಾಜದ ಅಧ್ಯಕ್ಷರಾದ ಜ್ಯೋತಿ ದೇವೆಂದ್ರಪ್ಪ, ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಘಟಕದ ಕಾರ್ಯದರ್ಶಿ ರೀನಾ ವೀರಭದ್ರಪ್ಪ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *