ವಿಧಾನ ಪರಿಷತ್ ಚುನಾವಣೆ: 3 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
1 min readವಿಧಾನ ಪರಿಷತ್ ಚುನಾವಣೆ: 3 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ
ಚಿತ್ರದುರ್ಗ,ನವೆಂಬರ್23:
ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯುತ್ತಿದ್ದು 3 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ಚುನಾವಣಾ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆಯು ಬುಧವಾರ ನಡೆದಿದ್ದು ಸಲ್ಲಿಕೆಯಾದ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗಿ ಇದರಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಕೆ.ಎಸ್.ನವೀನ್, ಕಾಂಗ್ರೆಸ್ ಪಕ್ಷದ ಬಿ.ಸೋಮಶೇಖರ್ ಹಾಗೂ ಪಕ್ಷೇತರರಾದ ಹನುಮಂತಪ್ಪ ಇವರ ನಾಮಪತ್ರವು ಕ್ರಮಬದ್ದವಾಗಿವೆ ಎಂದು ತಿಳಿಸಿದ್ದಾರೆ.