May 7, 2024

Chitradurga hoysala

Kannada news portal

ಉತ್ಸಾಹದಲ್ಲಿ ಮೈಮರೆತಿದ್ದು ಸೋಲಿಗೆ ಕಾರಣ: ಮತದಾರರ ತೀರ್ಪುಗೆ ತಲೆಬಾಗುತ್ತೇವೆ : ಮಾಜಿ ಸಂಸದ ಚಂದ್ರಪ್ಪ

1 min read



ಮತದಾರರ ತೀರ್ಪುಗೆ ತಲೆಬಾಗುತ್ತೇವೆ

ಉತ್ಸಾಹದಲ್ಲಿ ಮೈಮರೆತಿದ್ದು ಸೋಲಿಗೆ ಕಾರಣ

ಆಗಿರುವ ತಪ್ಪು ಸರಿಪಡಿಸಿಕೊಳ್ಳಲು ಎಚ್ಚರಿಕೆ ಸಂದೇಶ

ಚಿತ್ರದುರ್ಗ:
ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿದ್ದ ಚಿತ್ರದುರ್ಗ ವಿಧಾನ ಪರಿಷತ್ ಕ್ಷೇತ್ರದಲ್ಲಿ ಈ
ಬಾರಿ ಹಿಂದಿಗಿಂತಲೂ ಪಕ್ಷದ ಬೆಂಬಲಿಗರೇ ಗೆಲುವು ಸಾಧಿಸಿದ್ದರೂ ಪಕ್ಷದ ಅಭ್ಯರ್ಥಿಗೆ
ಸೋಲು ಆಗಿರುವ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.ಈ ಹಿಂದೆ ಜರುಗಿದ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿತ್ತು. ಈ ಬಾರಿಯೂ ಗೆಲುವು
ಸುಲುಭವಾಗಿತ್ತು. ಆರಂಭದಿಂದಲೂ ಪಕ್ಷದ ಅಭ್ಯರ್ಥಿ, ಮುಖಂಡರು, ಕಾರ್ಯಕರ್ತರು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿದರು.ಸ್ಥಳೀಯ ಸಂಸ್ಥೆಗಳ ಸದಸ್ಯರು ಕೂಡ ಅಭ್ಯರ್ಥಿ ಬಿ.ಸೋಮಶೇಖರ್ ಅವರ ಸರಳತೆ, ಪಕ್ಷ ನಿಷ್ಠೆಗೆ ಮಾರು ಹೋಗಿದ್ದರು. ಇದೆಲ್ಲವನ್ನೂ ಗಮನಿಸಿದ ಪಕ್ಷದ ಮುಖಂಡರಾದ ನಾವು ಪಕ್ಷದ ಅಭ್ಯರ್ಥಿ ಗೆಲುವು ಸಲೀಸು ಎಂದು ಮೈಮರೆತೆವು. ಕೊನೆಗಳಿಗೆಯಲ್ಲಿ ಆಗಿರುವ ಬೆಳವಣಿಗೆ
ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣವಾಯಿತು. ಆದರೂ ಅಭ್ಯರ್ಥಿ ಘೋಷಣೆ ಕೊನೆಗಳಿಗೆಯಲ್ಲಿ ಆಗಿದ್ದು, ಬಿ.ಸೋಮಶೇಖರ್ ಕ್ಷೇತ್ರಕ್ಕೆ ಹೊಸಮುಖವಾದರೂ ತನಗೆ ದೊರೆತ ಕೇವಲ 16 ದಿನಗಳಲ್ಲಿ ಅವಳಿ ಜಿಲ್ಲೆಯಲ್ಲಿ ನಿರಂತರ ಓಡಾಡಿ, ಎಲ್ಲ ಮುಖಂಡರು, ಕಾರ್ಯಕರ್ತರನ್ನು
ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಚಿತ್ರದುರ್ಗದ ವ್ಯಕ್ತಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಅವರು ಗಳಿಸಿರುವ ಗಣನೀಯ ಮತಗಳು ಸಾಕ್ಷಿ.ಗೆದ್ದೇ ಬಿಟ್ಟೇವು ಎಂದು ನಾವೆಲ್ಲರೂ ಅತ್ಯಂತ ಉತ್ಸಾಹದಿಂದ ಕೊನೆಗಳಿಗೆಯಲ್ಲಿ ಆಡಳಿತ
ಪಕ್ಷದ ತಂತ್ರಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಒಂದು ರೀತಿ ನಮ್ಮ ಕೈಯಲ್ಲಿದ್ದ ಗೆಲುವನ್ನು ಬಿಜೆಪಿಗೆ ನಾವೇ ಕೊಟ್ಟಂತೇ ಆಗಿದೆ. ಇಲ್ಲಿ ನಾವು ಎಡವಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ.ಎಂದು ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ ಪತ್ರಕೆಗೆ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *