ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಹೃದಯಾಘಾತ ದಿಂದ ನಿಧನ.
1 min readಕನ್ನಡದ ಕಬೀರ ಇಬ್ರಾಹಿಂ ಸುತಾರ್ ನಿಧನ.
ಕರ್ನಾಟಕ ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಸುಮಾರು 77 ಇಂದು 5/2/2022 ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಹಾಲಿಂಗಪೂರದ ನಿವಾಸಿ ಇಬ್ರಾಹಿಂ ಸುತಾರ ರವರು ಕಲವು ದಿನಗಳಿಂದ ಹೃದಯ ಸಂಬಂಧಿ ಸಮಸ್ಯೆ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾದೆ ಇಂದು ಬೆಳಗ್ಗೆ 6:30ಕ್ಕೆ ನಿಧನರಾಗಿದ್ದಾರೆ.
ಇತ್ತೀಚಿಗೆ ರಾಷ್ಟ್ರದ ಶ್ರೇಷ್ಠ ಪ್ರಶಸ್ತಿಯಾಗಿರುವ ಪದ್ಮಶ್ರೀಯನ್ನು ರಾಷ್ಟ್ರಪತಿ ಅವರಿಂದ ಪಡೆದುಕೊಂಡಿದ್ದರು.ಇವರ ಮನೆಯಲ್ಲಿ ಪ್ರವಚನ ಪುಸ್ತಕಗಳು ಹಾಗೂ ಪ್ರಶಸ್ತಿಗಳು ಎಲ್ಲೆಡೆ ಕಾಣುತ್ತವೆ. ಅವರ ಮನೆಗೆ ಭಾವೈಕ್ಯ ಎಂದು ಹೆಸರಿಟ್ಟು ಸದಾ ಭಾವೈಕ್ಯತೆಯನ್ನೇ ಸಾರುತ್ತಿದ, ಸುತಾರ್ ಕೇವಲ ನೆನಪು ಮಾತ್ರ.