ಹೆಚ್ ಆಂಜನೇಯ ನಮಗೆ ದೇವರಿದ್ದಂತೆ ವಯೋವೃದ್ಧ ವ್ಯಕ್ತಿಯ ಅನಿಸಿಕೆ
1 min read
ಹೆಚ್ ಆಂಜನೇಯ ನಮಗೆ ದೇವರಿದ್ದಂತೆ ವಯೋವೃದ್ಧ ವ್ಯಕ್ತಿಯ ಅನಿಸಿಕೆ
ಸಿರಿಗೆರೆ :
ಸಮೀಪದ ಭರಮಸಾಗರ ಜಿ.ಪಂ.ವ್ಯಾಪ್ತಿಯ ಹಿರೇಬೆನ್ನೂರು, ಚಿಕ್ಕಬೆನ್ನೂರು ಹಿ,ಗೊಲ್ಲರಹಟ್ಟಿಗೆ ಭಾನುವಾರ ಮತಯಾಚನೆಗೆ ಮಾಜಿ ಸಚಿವ ಹೆಚ್.ಆಂಜನೇಯ ಅವರು ಆಗಮಿಸಿದ ವೇಳೆ ಗ್ರಾಮಸ್ಥರು ಸಂಬ್ರಮಿಸಿ , ಆರತಿ ಎತ್ತಿ, ಜೆಸಿಬಿ ಮೂಲಕ ಹೂಮಳೆ ಸುರಿಸಿ ಸ್ವಾಗತಿಸಿದರು.
ಈ ವೇಳೆ ಹಿರೇಬೆನ್ನೂರು ಗೊಲ್ಲರಹಟ್ಟಿಗೆ ಮಾಜಿ ಸಚಿವರು ಆಗಮಿಸುತ್ತಲೇ ಜನರು ಕಾಂಗ್ರೆಸ್ ಪಕ್ಷದ ಪರವಾದ ಘೋಷಣೆ ಕೂಗುತ್ತಾ ಶಿಳ್ಳೆ, ಚಪ್ಪಾಳೆ ಹೊಡೆದು ಕುಣಿದಾಡಿದರು.
ಆಂಜನೇಯ ಅವರು ಸಚಿವರಾಗಿದ್ದಾಗ ಗಂಗಾ ಕಲ್ಯಾಣ, ರಸ್ತೆ ಅಭಿವೃದ್ಧಿ ಮಾಡಿಸಿದ್ದಾರೆ, ದೇವಸ್ಥಾನ ಕಟ್ಟಿಸಲು ಸಹಾಯ, ಬಡವರ ಮದುವೆಗಳಿಗೆ ಧನಸಹಾಯ ಮಾಡುವ ಮೂಲಕ ನಮ್ಮ ಪಾಲಿನ ದೇವರಾಗಿದ್ದಾರೆ ಎಂದು ಎಪ್ಪತ್ತು ವರ್ಷ ವಯಸ್ಸಿನ ವಯೋವೃದ್ಧರೊಬ್ಬರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ,ಅಭಿಮಾನ ತೋರಿದರು