ಹಿರೇವಂಕಲಕುಂಟಾ ಭಾಗದ ಗ್ರಾಮಗಳಲ್ಲಿ ರಾಯರಡ್ಡಿ ಮತಯಾಚನೆ
1 min readಹಿರೇವಂಕಲಕುಂಟಾ ಭಾಗದ ಗ್ರಾಮಗಳಲ್ಲಿ ರಾಯರಡ್ಡಿ
ಮತಯಾಚನೆ.
ಯಲಬುರ್ಗಾ :
ಹಾಲಪ್ಪ ಆಚಾರ್ ಅವರು ನೀರಾವರಿ ವಿಷಯದಲ್ಲಿ ಕ್ಷೇತ್ರದ ಜನತೆಗೆ ಸತ್ಯವನು ಮಾತನಾಡದೆ ಅಧಿಕಾರದ ವ್ಯಾಮೋಹಕ್ಕಾಗಿ ಸುಳ್ಳು ಭಾಷಣ ಮಾಡಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದರು
ತಾಲೂಕಿನ ಹಿರೇವಂಕಲಕುಂಟಾ ಜಿ ಪಂ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕವಂಕಲಕುಂಟಾ ಉಚ್ಚಲಕುಂಟಾ ಗ್ರಾಮದಲ್ಲಿ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಈ ಸಲ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ಉಚಿತವಾಗಿ 10 ಕೆಜಿ ಪ್ರತಿ ವ್ಯಕ್ತಿಗೆ ಅಕ್ಕಿ ಹಾಗೂ ಕುಟುಂಬದ ಗೃಹಿಣಗೆ ಪ್ರತಿ ತಿಂಗಳು 2 ಸಾವಿರ.ಹಾಗೂ 200 ಯೂನಿಟ್ ಉಚಿತ ವಿದ್ಯುತ್. ನೀಡುತ್ತವೆ. ನಮ್ಮ ಸರ್ಕಾರ ಬಂದ ಮರುದಿನವೇ ಈ ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳನ್ನು ನಾನು ಮಾಡುತ್ತೇನೆ ನನಗೆ ಈ ಬಾರಿ ಅವಕಾಶ ಮಾಡಿಕೊಡಿ ಎಂದು ಮತದಾರಿಗೆ ಮತಯಾಚನೆಯಲ್ಲಿ ಕೋರಿದರು
ವಿವಿಧ ಮುಖಂಡರು ಕಾಂಗ್ರೆಸ್ ಸೇಪೆ೯ಡೆ:
ತಾಳಕೇರಿ ಗ್ರಾಮದ ಮುಖಂಡರಾದ ದುರಗಪ್ಪ ಮಂಡಲಗೇರಿ,ಹಿರೇವಂಕಲಕುಂಟಾ, ಕಟಗಿಹಳ್ಷಿ,ಯಡ್ಡೋಣಿ ಗ್ರಾಮದ ವಿವಿಧ ಮುಖಂಡರು ಕಾಂಗ್ರೆಸ್ ಸೇಪೆ೯ಡೆಗೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಹನಮಂತಗೌಡ ಚಂಡೂರು, ವೀರನಗೌಡ ಬಳೂಟಗಿ, ರಾಘವೇಂದ್ರಚಾಯ೯ ಜೋಷಿ,ಮಹೇಶ್ ಹಳ್ಳಿ.ಅಪ್ಪಣ್ಣ ಜೋಷಿ,ರುದ್ರಪ್ಪ ಮರಕಟ್.ಬಸವರಾಜ ಹೀರೆಮನಿ, ಷಣ್ಮುಖಪ್ಪ ಬಳ್ಳಾರಿ,ವಿವಿಧ ಮುಖಂಡರು ಇದ್ದರು.