May 19, 2024

Chitradurga hoysala

Kannada news portal

ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಬಿ.ಎಸ್. ಪುರುಷೋತ್ತಮ್ ಇವರ ಚಿಕ್ಕಮ್ಮ ಶ್ರೀಮತಿ ಗೌರಮ್ಮ ನಿಧನ

1 min read

ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಬಿ.ಎಸ್. ಪುರುಷೋತ್ತಮ್ ಇವರ ಚಿಕ್ಕಮ್ಮ ಶ್ರೀಮತಿ ಗೌರಮ್ಮ ನಿಧನ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಳ್ಳಕೆರೆ:

ಗಾಂಧಿ ನಗರದ ವಾಸಿ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ
ಬಿ.ಶಾಮಪ್ಪ, ಮಾಸ್ಟರ್ ಇವರ ಧರ್ಮಪತ್ನಿ ಶ್ರೀಮತಿ ಗೌರಮ್ಮ ಸುಮಾರು 78 ವರ್ಷ ಇವರು ಸೋಮವಾರ ರಾತ್ರಿ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಇವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ನೀಡಿದರು, ಚಿಕಿತ್ಸೆ ಫಲಕಾರಿಯಾಗದೆ, ದಿನಾಂಕ:-04-09-2023 ರ ಸೋಮವಾರ ರಾತ್ರಿ ಸುಮಾರು 1-30 ಗಂಟೆಗೆ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತ ಗೌರಮ್ಮನವರು, ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಬಿ.ಎಸ್. ಪುರುಷೋತ್ತಮ್ ಮತ್ತು ಬಿ.ಎಸ್. ಪ್ರಭಾಕರ್, ನಿವೃತ್ತ ಬ್ಯಾಂಕ್ ಅಧಿಕಾರಿ,ಹಾಗು ಬಿ.ಎಂ ನಿರಂಜನ್, ಕೆ.ಎಸ್.ಎಸ್.ಐ.ಡಿ.ಸಿ ಯ ನಿವೃತ್ತ ಅಧಿಕಾರಿ ಇವರ ಚಿಕ್ಕಮ್ಮನವರಾಗಿರುತ್ತಾರೆ.

ಮೃತ ಗೌರಮ್ಮ ಇವರಿಗೆ ರೇಣುಕ ಪ್ರಸಾದ್ ಮತ್ತು ಅರವಿಂದ್ ಇಬ್ಬರು ಗಂಡು ಮಕ್ಕಳು ಇದ್ದು,ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಅಂತ್ಯಕ್ರಿಯೆ

ಇಂದು ದಿನಾಂಕ:-05 -09-2023 ರ ಮಂಗವಾರ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹರಿಜನ ರುದ್ರ ಭೂಮಿಯಲ್ಲಿ ನಡೆಯಲಿದೆ,ಎಂದು ಕುಟುಂಬದವರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *