April 26, 2024

Chitradurga hoysala

Kannada news portal

24 ಶಾಸಕರಿಗೆ ಶುಭ ಶ್ರಾವಣ ಗಿಫ್ಟ್ ನೀಡಿದ ಯಡಿಯೂರಪ್ಪ. ಯಾರಿಗೆಲ್ಲ ನಿಗಮ

ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ 24 ಶಾಸಕರಿಗೆ ನಿಗಮ – ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ, ಬಂಪರ್ ಗಿಫ್ಟ್ ನೀಡಿದ್ದಾರೆ. ಈ ಮೂಲಕ ಕೊರೋನಾ ಸಂಕಷ್ಟದ ನಡುವೆಯೂ ಶಾಸಕರಿಗೆ ಭರ್ಜರಿ ಉಡುಗೋರೆ ನೀಡಿದ್ದಾರೆ.

ಈ ಕುರಿತಂತೆ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಈ ಕೆಳಕಂಡ 24 ಶಾಸಕರುಗಳಿಗೆ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕೂಡಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.

ಹೀಗಿದೆ.. 24 ಶಾಸಕರಿಗೆ ನೀಡಲಾಗಿರುವ ನಿಗಮ – ಮಂಡಳಿ ಅಧ್ಯಕ್ಷರ ಪಟ್ಟಿ

  1. ಅರಗ ಜ್ಞಾನೇಂದ್ರ – ತೀರ್ಥಹಳ್ಳಿ – ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು
  2. ಎಂ.ಚಂದ್ರಪ್ಪ – ಹೊಳಲ್ಕೆರೆ – ಅಧ್ಯಕ್ಷರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
  3. ರಾಜು ಗೌಡ – ಶೋರಾಪುರ – ಅಧ್ಯಕ್ಷರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ
  4. ಎಂ.ಪಿ.ಕುಮಾರಸ್ವಾಮಿ – ಮೂಡಿಗೆರೆ – ಅಧ್ಯಕ್ಷರು, ಕರ್ನಾಟಕ ಮಾರುಕಟ್ಟೆ ಕನ್ಸಲ್ಟೆಂಟ್ ಮತ್ತು ಏಜೆನ್ಸಿಸ್ ಲಿಮಿಟೆಂಡ್
  5. ಎ ಎಸ್ ಪಾಟೀಲ್ ನಡಹಳ್ಳಿ – ಮುದ್ದೇಬಿಹಾಳ – ಅಧ್ಯಕ್ಷರು, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
  6. ಹೆಚ್ ಹಾಲಪ್ಪ – ಸಾಗರ – ಅಧ್ಯಕ್ಷರು, ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್(MSIL)
  7. ಮೂಡಾಳ್ ವಿರೂಪಾಕ್ಷಪ್ಪ – ಚೆನ್ನಗಿರಿ – ಅಧ್ಯಕ್ಷರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
  8. ಜಿ ಹೆಚ್ ತಿಪ್ಪಾರೆಡ್ಡಿ – ಚಿತ್ರದುರ್ಗ – ಅಧ್ಯಕ್ಷರು, ಡಿ.ದೇವರಾಜು ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ
  9. ಶಿವನಗೌಡ ನಾಯಕ್ – ದೇವದುರ್ಗ – ಅಧ್ಯಕ್ಷರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ
  10. ಕಳಕಪ್ಪ ಗುರುಶಾಂತಪ್ಪ ಬಂಡಿ – ರೋಣ – ಅಧ್ಯಕ್ಷರು, ಕೆ ಎಸ್ ಎಸ್ ಐ ಡಿ ಸಿ
  11. ಪರಣ್ಣ ಈಶ್ವರಪ್ಪ ಮುನವಳ್ಳಿ – ಗಂಗಾವತಿ – ಅಧ್ಯಕ್ಷರು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
  12. ಸಿದ್ದು ಸವದಿ – ತೇರದಾಳ – ಅಧ್ಯಕ್ಷರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
  13. ಪ್ರೀತಮ್ ಜಿ ಗೌಡ – ಹಾಸನ – ಅಧ್ಯಕ್ಷರು, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ
  14. ರಾಜಕುಮಾರ್ ಪಾಟೀಲ್ ತೇಲ್ಕೂರ್ – ಸೇಡಂ – ಅಧ್ಯಕ್ಷರು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲಬುರ್ಗಿ
  15. ಅಪ್ಪುಗೌಡ – ಗುಲ್ಬರ್ಗ ದಕ್ಷಿಣ – ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರ್ಗಿ
  16. ಶಂಕರ್ ಪಾಟೀಲ್ ಮುನೇನಕೊಪ್ಪ – ನವಲಗುಂದ – ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ
  17. ಹೆಚ್ ನಾಗೇಶ್ – ತಿಪಟೂರು – ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಮಿತ
  18. ಎಸ್ ವಿ ರಾಮಚಂದ್ರ – ಜಗಳೂರು – ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ
  19. ಓಲೇಕಾರ ನೆಹರು ಚನ್ನಬಸಪ್ಪ – ಹಾವೇರಿ – ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತಿ
  20. ಐಹೊಳೆ ದುರ್ಯೋಧನ ಮಹಾಲಿಂಗಪ್ಪ – ರಾಯಬಾಗ – ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
  21. ಲಾಲಾಜಿ ಆರ್ ಮೆಂಡನ್ – ಕಾಪು – ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ
  22. ಬಸವರಾಜ್ ದಡೇಸೂರು – ಕನಕಗಿರಿ – ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ
  23. ಡಾ.ಎಸ್.ಶಿವರಾಜ್ ಪಾಟೀಲ್ – ರಾಯಚೂರು – ಕರ್ನಾಟಕ ರಾಜ್ಯ ಜೈವಿಕ ಇಂದಧ ಅಭಿವೃದ್ಧಿ ಮಂಡಳಿ
  24. ಸಿಎಸ್ ನಿರಂಜನ್ ಕುಮಾರ್ – ಗುಂಡ್ಲುಪೇಟೆ – ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ ನಿಯಮಿತ

ಈ ರೀತಿಯಾಗಿ 24 ಶಾಸಕರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.