*ಕಲಾವಿದರು ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳಸಿಕೊಳ್ಳಿ: ಡಿ ಓ ಮುರಾರ್ಜಿ*
1 min read*ಕಲಾವಿದರು ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳಸಿಕೊಳ್ಳಿ: ಡಿ ಓ ಮುರಾರ್ಜಿ*
ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು ಹಾಗೆಯೇ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ನೆರವಾಗುವ ದಿಸೆಯಲ್ಲಿ ಜಿಲ್ಲೆಯಲ್ಲಿ ಕಲಾವಿದರ ಒಕ್ಕೂಟ ಸ್ಥಾಪಿಸಲಾಗಿದೆ ಕಲಾವಿದರು ಒಕ್ಕೂಟದ ಅಡಿಯಲ್ಲಿ ಸೇರಿಕೊಂಡು ಸಂಘಟಿತರಾಗುವ ಜತೆಗೆ ಪರಸ್ಪರ ಸಹಾಯ ಪಡೆದು ಕೊಳ್ಳಬೇಕೆಂದರು. ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯದ ಕೌನ್ಸಿಲ್ ಸದಸ್ಯ ಹಾಗೂ ಕಲಾವಿದ ಜೆ.ಗಣೇಶ್ ಮಾತನಾಡಿ, ಕೋವಿಡ್ ನ ಸಂಕಷ್ಟಕ್ಕೆ ಒಳಗಾಗಿರುವ ಕಲಾವಿದರಿಗೆ ಸಹಾನುಭೂತಿಗಿಂತ ಸಂಕಷ್ಟಕ್ಕೆ ಸ್ಪಂದಿಸುವ ಹಾಗೂ ಸಹಾಯ ಮಾಡುವವರ ಅಗತ್ಯವಿದೆ ಎಂದರು.
ಇಂದು ಕಲಾವಿದರ ಬದುಕು ಕಾರ್ಯಕ್ರಮಗಳಿಲ್ಲದೆ ದುಸ್ತರವಾಗಿದೆ ದೈನಂದಿನ ಬದುಕನ್ನು ಸಾಗಿಸಲು ಹರ ಸಾಹಸ ಪಡುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಕಲಾವಿದರ ಬಗ್ಗೆ ಕೆಲವರು ಸಹಾನುಭೂತಿ ವ್ಯಕ್ತಪಡಿಸುವವರು ನಮ್ಮ ನಡುವೆ ಇದ್ದಾರೆ ಇಂತಹವವರಿಗಿಂತ ಸಂಕಷ್ಟಕ್ಕೆ ಸ್ಪಂದಿಸುವ ಸಹಾಯ ಹಸ್ತ ಚಾಚುವ ಜನರ ಅವಶ್ಯಕತೆ ಇದ್ದು ಇಂತಹ ಕಾರ್ಯ ಮಾಡುತ್ತಿರುವ ಹಿಮಂತ ಮಹಿಳಾ ವಿಕಾಸ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರ ಕಾರ್ಯ ಶ್ಲಾಘನೀಯ ಎಂದರು.
ಹಿಮಂತ ಮಹಿಳಾ ವಿಕಾಸ ಸಂಸ್ಥೆ ಕಾರ್ಯದರ್ಶಿ ಹೆಚ್.ಎನ್. ವರಲಕ್ಷ್ಮಿ ಮಾತನಾಡಿ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ನಮ್ಮ ಸಂಸ್ಥೆ ವತಿಯಿಂದ ಸಣ್ಣ ಸೇವೆ ಮಾಡಿದ್ದೇವೆ ಇದು ನಮಗೆ ತುಂಬಾ ಖುಷಿಯಾಗಿದೆ ಇಂತಹ ಕಾರ್ಯ ಮಾಡಲು ನೀವೆಲ್ಲರೂ ನಮಗೆ ಪ್ರೇರಣೆಯಾಗುವ ಮೂಲಕ ನಮ್ಮ ಸೇವೆಗೆ ಸಾರ್ಥಕತೆಯನ್ನು ನೀಡಿರುವಿರಿ ಕಲಾವಿದರಿಗೆ ನಮ್ಮ ಸಂಸ್ಥೆಯು ಅಭಾರಿಯಾಗಿದೆ ಎಂದರು.
ಹಿಮಂತ ಮಹಿಳಾ ವಿಕಾಸ ಸಂಸ್ಥೆ ಅಧ್ಯಕ್ಷೆ ಹಾಗೂ ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಮ್ಮ ಅಧ್ಯಕ್ಷತೆ ವಹಿಸಿದ್ದರು.
ಅಂತರಾಷ್ಟ್ರೀಯ ಯೋಗಪಟು ಪೂಜಾ ಹೂಗಾರ್, ಪುಷ್ಪಾ, ಕಲಾವಿದರಾದ ರಾಜು, ಪರುಶುರಾಮ, ಪದ್ಮಾವತಿ, ಜಾನಕಿ, ಮಂಜುನಾಥ್, ಪ್ರಕಾಶ್, ಶೋಭಾ ಉಪಸ್ಥಿತರಿದ್ದರು.