ಗೊರವನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ನಿಧನ
ತುಮಕೂರು:
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಶನಿವಾರ ದೈವದಿನರಾಗಿದ್ದಾರೆ.
ಪ್ರಸನ್ನಕುಮಾರ್ ಇವರು ಗೊರವರನಹಳ್ಳಿ ಶ್ರೀ ಲಕ್ಷ್ಮಿದೇವಸ್ಥಾನದ ದಿವಂಗತ.ಕಮಲಮ್ಮನವರ ಏಕೈಕ ಪುತ್ರರಾಗಿದ್ದರು.ತಾಯಿಯ ಮರಣಾನಂತರ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಪ್ರಸನ್ನ ಕುಮಾರ್ ಸೇವೆ ಸಲ್ಲಿಸಿಕೊಂಡು ಬಂದಿದ್ದರು.
ಮೃತರು ಇತ್ತೀಚೆಗೆ ಒಂದು ವಾರದಿಂದ ಬೆಂಗಳೂರಿನ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಿಸದೆ ಶನಿವಾರ ಮೃತರಾಗಿದ್ದು ಪತ್ನಿ- ಮಗಳು- ಮಗ ಹಾಗೂ ಅಪಾರ ಬಂದು ಭಕ್ತರನ್ನು ಅಗಲಿದ್ದಾರೆ.