ಆಧ್ಯಾತ್ಮಿಕ ಸಾಧನೆ ಮೂಲಕ ಬದುಕು ಹಸನುಗೊಳಿಸಿಕೊಳ್ಳಿ : ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ.
1 min read
ಆಧ್ಯಾತ್ಮಿಕ ಸಾಧನೆ ಮೂಲಕ ಬದುಕು ಹಸನುಗೊಳಿಸಿಕೊಳ್ಳಿ : ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ.
CHITRADURGA HOYSALA NEWS/
ಹೊಸದುರ್ಗ ಸುದ್ದಿ.
ಹೊಸದುರ್ಗ : ಆಧ್ಯಾತ್ಮಿಕ ಸಾಧನೆಗಳ ಶಿಬಿರದ ಮೂಲಕ ಬದುಕನ್ನು ಹಸನುಗೊಳಿಸಬೇಕು. ನಾವು ಮಾಡುವ ಸತ್ಕರ್ಮಗಳು ಸಾಧನೆಯ ಪಥವಾಗಿರುತ್ತವೆ. ಎಲ್ಲದಕ್ಕೂ ಮೂಲ ಪ್ರೀತಿ. ಪ್ರೀತಿಯಿದ್ದರೆ ಎಲ್ಲಾ ಒಂದಾಗುತ್ತಾರೆ.ಜ್ಞಾನ ಪ್ರಜ್ಞೆ, ಪ್ರೀತಿ ಗಳಿಸಿ, ಎಲ್ಲವನ್ನು ಉಳಿಸಿಕೊಂಡು, ಪ್ರೀತಿಯಿಂದಾ ಮುಂದೆ ಸಾಗಿ.
ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ ಹಾಗೂ ಸಿದ್ಧ ಸಮಾಧಿ ಯೋಗ ಹಾಗೂ ಹೊಸದುರ್ಗ ಸದ್ಗುರು ಸೇವಾಶ್ರಮದ ವತಿಯಿಂದ ಪಟ್ಟಣದ ‘ಸದ್ಗುರು ಸೇವಾಶ್ರಮದಲ್ಲಿ’ ಶನಿವಾರ ಆಯೋಜಿಸಿದ್ದ ‘2 ನೇ ದಿನದ ವಿಶ್ವ ಹೃದಯ ಸಮ್ಮೇಳನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಧರ್ಮದ ಎಸ್.ಎಸ್.ವೈ ಆಧ್ಯಾತ್ಮಿಕವೂ ವಿಶ್ವ ಹೃದಯ ಸಮ್ಮೇಳನವನ್ನ ದೇಹದಲ್ಲಿ ಬದುಕಿನುದ್ದಕ್ಕೂ ಮಿಡಿಯುವ ಹೃದಯ ಹೃದಯ ಕೇವಲ ಮಾಂಸಖಂಡವಲ್ಲ ಸಾಗರದಲ್ಲಿನ ಎಲ್ಲಾ ಅಂಶಗಳನ್ನು ಒಂದು ಹನಿ ಬಿಂದುವಿನೀರಿನಲ್ಲಿರುತ್ತೆ ಬೇರೆ ಧರ್ಮ,ತತ್ವಗಳ ಹೆಸರಿನಲ್ಲಿ.ಭಾವೈಕ್ಯತೆ ಪ್ರೀತಿ ಒಡೆಯುತ್ತಿರುವ ಈ ಸಂದರ್ಭದಲ್ಲಿ ಹೃದಯ ಬೆಸೆಯುವ ಕಾರ್ಯಕ್ರಮವಿದಾಗಿದೆ. ಭೌತಧ್ರವ್ಯ ಸರಿಯಾದ ರೀತಿಯಲ್ಲಿ ವಿಭಜಿಸಿದರೆ ಹೃದಯ ಬೆಸೆಯುವ ಮುನ್ನ ಅಣುವನ್ನು ನಿಭಜಿಸಿದ್ದರಿಂದ ಮನುಷ್ಯನ ಹೃದಯ ಬೇರೆ ರೀತಿಯಗುತ್ತದೆ .ವಿಜ್ಞಾನ ಬೆಳೆಯಲಿ, ತಂತ್ರಜ್ಞಾನ ಅರಳಲಿ.ಮಾನವನ ಹೃದಯವೂ ಕೂಡ ವಿಶಾಲವಾಗಿ ತಪ್ಪಿದ್ದಲ್ಲಿ ಪ್ರಾಣಿ,ಮನುಷ್ಯರಿಗೆ ವ್ಯತ್ಯಾಸವಿಲ್ಲ ಎಂಬಂತೆ ಆಗುತದೆ.ಪ್ರಜ್ಞೆ ಪೂರ್ಣ ಅರಳಿರುವ ಮನುಷ್ಯ ಪ್ರಾಣಿ ಗಳಿಗಿಂತ ವಿಭಿನ್ನವಾಗಿದ್ದು.ಮನುಷ್ಯ ರೂಪ ಧರಿಸಿ,ಮೃಗಗಳ ರೀತಿ ವರ್ತಿಸಿದರೆ,ಮನುಷ್ಯ ರೂಪದ ಮೃಗ ಮನಸ್ಸು ಅರಳಿಲ್ಲ ಆಜ್ಞಾನ ಹೋಗಿಲ್ಲ ದೇವರ ಆನಂದ ಜ್ಞಾನದ ಕಡೆಗೆ ಹೋಗಲು ಅಂತಃಕರಣ ನೀಡಿದೆ.ಎಲ್ಲೇ ಹೋದರೂ ದೇವರನ್ನು ಕಾಣಬೇಕು ಬಾಹ್ಯದೇಹ, ಮನಸ್ಸು,ಅಂತಃಕರಣ ಮತ್ತು ಕಾರಣ ದೇಹಗಳು. ಜ್ಞಾನಿ ಯಲ್ಲೂ ಕೂಡ ದೋಷ ಹುಡುಕುತ್ತಾರೆ ಕೆಟ್ಟ ಮನುಸುಳವರು ಆದ್ದರಿಂದ ಧ್ಯಾನ ಪ್ರಾಣಯಾಮ ಭಕ್ತಿ ಮೋಕ್ಷದಿಂದ ಎಲ್ಲವೂ ಸಾಧ್ಯ ಇವೆಲ್ಲವೂ ಪ್ರೀತಿಯಿಂದ ಮಾತ್ರ ಸಾಧ್ಯ ಪ್ರೀತಿಇಂದಿರಲು ಎಲ್ಲರೂ ಪ್ರಯತ್ನಿಸಿ ಎಂದು ಹೇಳಿದರು.
ಹಿರಿಯೂರುನ ದತ್ತ ಕುಟೀರದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
ಮಾತನಾಡಿದ್ದು ಜಗತ್ತಿನಲ್ಲಿ ಭಗವಂತನ ಅನುಗ್ರಹವಿಲ್ಲದಿದ್ದರೆ ಮನುಷ್ಯತ್ವ ಮೋಕ್ಷತ್ವ,
ಸದ್ಗುರು ಸೇವೆಯ ವಸ್ತು ನಮಗೆ ಸಿಕ್ಕಿದೆ ಸಾರ್ಥಕಪಡಿಸಿಕೊಳ್ಳಿ
ಮುಕ್ತಿ,ಮೋಕ್ಷ, ವಾತ್ಸಲ್ಯ ದಿಂದ
ಮುಕ್ತಿ ಮೋಕ್ಷಕ್ಕೆ ಪ್ರಯತ್ನ ಪಡಬೇಕು ಎಂದು ಆಶೀರ್ವಚನವನ್ನು ನೀಡಿದರು.
ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಗಳು ಮಾತನಾಡಿದ್ದು ಸದ್ಗುರು ಆಶ್ರಮ ಎಂದರೆ ಇದೊಂದು ಪ್ರಶಾಂತವಾದ ಆಶ್ರಮವಿದ್ದಂತೆ ಗುರು ಸಂಕಲ್ಪದಿಂದ ಹೃದಯಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹೃದಯ ಕದಲಬೇಕು ಕರಗಬೇಕು ಆಗ ಮನುಷ್ಯ ಜನ್ಮ ಸಾರ್ಥಕ.ಗುರು ಶ್ರದ್ಧೆ ಭಕ್ತಿ ಸಂಸ್ಕೃತಿ. ಇವೆಲ್ಲ ಒಂದಾಗಿ ಸೇರಿದರೆ ಸಮಾಜ ಚೆನ್ನಾಗಿರುತ್ತದೆ. ಹೀಗೆ ಸೇರಿಸೋದೆ ಸುಯೋಗ. ಋಷಿಗಳನ್ನು ಸೇರಿಸಲು ಈ ರೀತಿ ಕಾರ್ಯಕ್ರಮ ಮಾಡಬೇಕು.ಮನುಷ್ಯ ಜನ್ಮ ಅಪರೂಪ. ಇದನ್ನು ಸ್ವಾ ವಿನಿಯೋಗ ಮಾಡದಿದ್ದಲ್ಲಿ ಬಿರುಕು ವ್ಯರ್ಥ.ಈ ಜನ್ಮ ಸಾರ್ಥಕ ಮಾಡಲು ಭಗವಂತ ಗುರುವಿನ ರೂಪದಲ್ಲಿ ಬರುತ್ತಾರೆ.ದಯೆಯಿಂದ ತುಂಬಿರುವ ಹೃದಯ ಅಮೃತ ಇದೇ ವಿಶ್ವ ಹೃದಯ ಸಮ್ಮೇಳನ.
ಎಂದಿನಂತೆ ಇಂದು ಬೆಳಿಗ್ಗೆ ದತ್ತ ಹೋಮ ಮಧ್ಯಾನ ಭಜನೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನು ಸದ್ಗುರು ಸೇವಾಶ್ರಮದ ಅಧ್ಯಕ್ಷರಾದ ಬಿ ವಿ ಲವಕುಮಾರ್. ಮತ್ತು ಎಸ್ ಎಸ್ ವೈ ನ ಕಾರ್ಯ್ಯಾಧ್ಯಕ್ಷರಾದ ಸತೀಶ್ ಅವರು ಮುಂದಾಳತ್ವದಲ್ಲಿ ಎರಡನೇ ದಿನದ ವಿಶ್ವ ಹೃದಯ ಸಮ್ಮೇಳನವು ಇಂದು ನಡೆದಿದ್ದು ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ.