May 2, 2024

Chitradurga hoysala

Kannada news portal

ಹಳ್ಳಿಗಳಿಗೆ ಭೇಟಿ, ಕಾಂಗ್ರೆಸ್ ಅಭ್ಯರ್ಥಿ ಪರ – ಬಿ.ಜಿ.ಗೋವಿಂದಪ್ಪ ಮತಯಾಚನೆ

1 min read

ಹಳ್ಳಿಗಳಿಗೆ ಭೇಟಿ, ಕಾಂಗ್ರೆಸ್ ಅಭ್ಯರ್ಥಿ ಪರ – ಬಿ.ಜಿ.ಗೋವಿಂದಪ್ಪ ಮತಯಾಚನೆ

ವರದಿ ಕಾವೇರಿ ಮಂಜಮ್ಮನವರ್.

ಚಿತ್ರದುರ್ಗ ಹೊಯ್ಸಳ ಸುದ್ದಿ:

ಹೊಸದುರ್ಗ :

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಬಿ‌.ಎನ್.ಚಂದ್ರಪ್ಪನವರ ಪರವಾಗಿ ಇಂದು ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜಿ.ಗೋವಿಂದಪ್ಪನವರು ಹೊಸದುರ್ಗ ತಾಲ್ಲೋಕಿನ ಹೆಗ್ಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಕ್ಷೇತ್ರ ಕಡವಿಗೆರೆಯ ಮಾವಿನಕಣಿವೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

ಹೆಗ್ಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡವಿಗೆರೆ, ವೆಂಗಳಾಪುರ, ಓಬಳಾಪುರ ತಾಂಡ್ಯ, ಹೆಗ್ಗೆರೆ, ಸೊಪ್ಪಿನ ಗುಡ್ಲು, ದಳವಾಯಿಕಟ್ಟೆ ಮತ್ತು ಗಿರಿಮಲ್ಲಯ್ಯನ ಪಾಳ್ಯ ಗ್ರಾಮಗಳಲ್ಲಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪನವರ ಪರವಾಗಿ ಮತಯಾಚನೆ ಮಾಡಿದರು.

ಬಳಿಕ ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಈ ದೇಶದ ಭವಿಷ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬಡವರ ಪರವಾಗಿ ಮಧ್ಯಮ ವರ್ಗದವರ ಪರವಾಗಿ ರಾಜ್ಯ ಸರ್ಕಾರ ಈಗಾಗಲೇ ಐದು ಗ್ಯಾರಂಟಿಗಳ ಮೂಲಕ ಸದೃಢರನ್ನಾಗಿಸಲು ಮುಂದಾಗಿದ್ದು ಅದರ ಪ್ರಯೋಜನವನ್ನು ಎಲ್ಲರೂ ಪಡೆಯುತ್ತಿದ್ದೀರಿ ಹೀಗಿರುವಾಗ ಕೇಂದ್ರದಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮತ್ತಷ್ಟು ಬಡವರ ಬದುಕು ಸೋಲಲಿತವಾಗುತ್ತದೆ ಅದಕ್ಕಾಗಿ ದಯವಿಟ್ಟು ಎಲ್ಲರೂ ಕಾಂಗ್ರೆಸ್ ಗೆ ಮತ ಹಾಕಿ ಎಂದು ಮನವಿ ಮಾಡಿದರು..

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲೋಕೇಶಪ್ಪ, ಪದ್ಮನಾಭ್, ಕೆಪಿಸಿಸಿ ಸದಸ್ಯರಾದ ಎಂ.ಪಿ.ಶಂಕರ್, ಪ್ರಚಾರ ಸಮಿತಿ ಅಧ್ಯಕ್ಷರಾದ ಆರ್.ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷರಾದ ಹೆಚ್.ಟಿ.ಬಸವರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ದೀಪಿಕಾ ಸತೀಶ್, ಗ್ಯಾರಂಟಿ ಅನುಷ್ಠಾನ‌ ಸಮಿತಿ ಉಪಾಧ್ಯಕ್ಷರಾದ ಶ್ರೀನಿವಾಸ್, ಸದಸ್ಯರಾದ ಮೂರ್ತಪ್ಪ, ಮುಖಂಡರಾದ ಎಂ.ಎಚ್.ಕೃಷ್ಣಮೂರ್ತಿ, ಬೊಮ್ಮನಪಾಳ್ಯ ಬಸವರಾಜ್, ಓಬಳಾಪುರ ಹನುಮಂತಪ್ಪ, ಕೆ.ಟಿ.ಮಂಜುನಾಥ್, ಕಂಚೀಪುರ ತಿಪ್ಪೇಸ್ವಾಮಿ, ವೆಂಗಳಾಪುರ ರಂಗನಾಥ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಹಾಗೂ ಸ್ಥಳೀಯ ಮುಖಂಡರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು..

About The Author

Leave a Reply

Your email address will not be published. Required fields are marked *