ಮಂಜುನಾಥ್ ಆರ್.ಎಲ್. ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ) ಪರೀಕ್ಷೆಯಲ್ಲಿ ಶೇ.92 ಅಂಕ
1 min read
ಮಂಜುನಾಥ್ ಆರ್.ಎಲ್. ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ) ಪರೀಕ್ಷೆಯಲ್ಲಿ ಶೇ.92 ಅಂಕ
ಚಿತ್ರದುರ್ಗ ಹೊಯ್ಸಳ /
ಚಿತ್ರದುರ್ಗ:
ಆತ್ಮೀಯ ಸ್ನೇಹಿತರೇ,
ನಿಮ್ಮೊಂದಿಗಿನ ಹಲವು ವರ್ಷಗಳ ಓಡನಾಟದ ಫಲ ಹಾಗೂ ನಿಮ್ಮ ಹಾರೈಕೆ ಕಾರಣ ನನ್ನ ಪುತ್ರ ಮಂಜುನಾಥ್ ಆರ್.ಎಲ್. ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ, ಎಸ್ಆರ್ಎಸ್ ಕಾಲೇಜ್, ಚಿತ್ರದುರ್ಗ) ಪರೀಕ್ಷೆಯಲ್ಲಿ ಶೇ.92 ಅಂಕ ಗಳಿಸಿದ್ದಾನೆ.
ನನ್ನ ಪತ್ರಿಕೋದ್ಯಮದ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದೇನೆ. ಅತ್ಯಂತ ಸಂಕಷ್ಟದ ದಿನಗಳಲ್ಲಿ ನೀವು ನನ್ನ ಬೆಂಬಲಕ್ಕೆ ನಿಂತಿದ್ದೀರಾ. ಆದ್ದರಿಂದ ನನ್ನ ಮಗ ಶೇ.92 ಅಂಕ ಗಳಿಸಿರುವ ಈ ಸಂತಸದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ನನ್ನ ಪಾಲಿನ ಕರ್ತವ್ಯದ ಜೊತೆಗೆ ನನಗೆ ಅತ್ಯಂತ ಖುಷಿ ಕೊಡುವ ವಿಷಯ ಆಗಿದೆ.
ಇದೆಲ್ಲವೂ ನಿಮ್ಮಗಳ ಹಾರೈಕೆ ಆಗಿದೆ. ಮುಂದೆಯೂ ನಿಮ್ಮ ಶುಭ ಆಶೀರ್ವಾದ ನನ್ನ ಪುತ್ರನ ಮೇಲೆ ಇರಲಿ ಎಂದು ಸ್ನೇಹಿತರಾದ ನಿಮ್ಮಲ್ಲಿ ವಿನಂತಿಸಿಕೊಳ್ಳುವೆ.
ಎಚ್.ಲಕ್ಷ್ಮಣ್
ಹಿರಿಯ ಪತ್ರಕರ್ತರು
ಚಿತ್ರದುರ್ಗ