ಇಸ್ಪೀಟ್ ಅಡ್ಡೆ ಮೇಲೆ ಚಳ್ಳಕೆರೆ ಪೋಲಿಸ್ ಅಧಿಕಾರಿಗಳು ದಾಳಿ ಪ್ರಕರಣ ದಾಖಲು
1 min readಇಸ್ಪೀಟ್ ಅಡ್ಡೆ ಮೇಲೆ ಚಳ್ಳಕೆರೆ ಪೋಲಿಸ್ ಅಧಿಕಾರಿಗಳು ದಾಳಿ ಪ್ರಕರಣ ದಾಖಲು
ಚಿತ್ರದುರ್ಗ ಹೊಯ್ಸಳ ನ್ಯೂಸ್ /
ಚಳ್ಳಕೆರೆ :
ವಿವಿಧ ಕಡೆ ಅಕ್ರಮ ಜೂಜಾಟದ ಇಸ್ಪೀಟ್ ಅಡ್ಡೆ ಮೇಲೆ ಪೋಲಿಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೋಮವಾರ ದಾಳಿ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುಗಾದಿ ಹಬ್ಬಕ್ಕೂ ಮುನ್ನವೇ ಇಸ್ಪೀಟ್ ಪ್ರೀಯರಿಗೆ ಶಾಖ್ ನೀಡಿದ್ದು ಡಿವೈಎಸ್ಪಿ ರಾಜಣ್ಣ ಮಾರ್ಗದರ್ಶನದಲ್ಲಿ ಚಳ್ಳಕೆರೆ ಠಾಣಾಧಿಕಾರಿ ಕೆ.ಕುಮಾರ್ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಲು ತಂಡ ರಚನೆ ಮಾಡಿದ್ದು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಖಚಿತ ಮೇರೆಗೆ ಚಿತ್ರಯ್ಯನಹಟ್ಟಿ 6 ಜನ,3780 ರೂ. ಅಂಬೇಡ್ಕರ್ ನಗರ 5 ಜನ 4540 ರೂ. ಗಾಂಧಿನಗರ ಇಬ್ಬರು ಆರೋಪಿಗಳು 3250 ರೂ, ಅಂಬೇಡ್ಕರ್ ನಗರ 5 ಜನ 2210- ರೂ. ಕಾಟಪ್ಪನಹಟ್ಟಿ 5 ಜನ2030 ರೂ. ನನ್ನಿವಾಳ 4 ಜನ1600 ರೂ.ಗಾಂಧಿನಗರ 6 ಜನ1820 ರೂ.ಹೆಗ್ಗೆರೆ 8 ಜನ4350 ರೂ.ವೀರದಿಮ್ಮನಹಳ್ಳಿ 6 ಜನ15500 ರೂ. ಬೊಮ್ಮಸಮುದ್ರ 5 ಜನ8800 ರೂ ಮದಕರಿ ನಗರ ಎರಡು ಜನ 2300 ರೂ.ಚಿತ್ರಯ್ಯನಹಟ್ಟಿ 4 ಜನ3000 ರೂ ಪಿಎಸ್ಐಗಳಾದ ಸತೀಶ್ ನಾಯ್ಕ, ಧರೆಪ್ಪ, ಶಿವರಾಜ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ಕೆ.ಕುಮಾರ್ ತಿಳಿಸಿದ್ದಾರೆ.