April 28, 2024

Chitradurga hoysala

Kannada news portal

ಗ್ರಾಪಂ ಮಾಜಿ ಸದಸ್ಯ ಚಂದ್ರಪ್ಪ‌ ನಿಧನ

1 min read

ಗ್ರಾಪಂ ಮಾಜಿ ಸದಸ್ಯ ಚಂದ್ರಪ್ಪ‌ ನಿಧನಕ್ಕೆ ಮಾಜಿ‌ ಸಚಿವ ಎಚ್.ಆಂಜನೇಯ ಸಂತಾಪ.

ಹೊಳಲ್ಕೆರೆ:

ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ, ಮೀಸೇಕಾಟಪ್ಪ ಜಯಂತಿ ನಗರದ ನಿವಾಸಿ ಚಂದ್ರಪ್ಪ(56) ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅನೇಕ‌ ಬಂಧುಳಗವನ್ನು ಅಗಲಿದ್ದಾರೆ.

ಮಾಜಿ‌ ಸಚಿವ ಎಚ್.ಆಂಜನೇಯ ರವರು ಶನಿವಾರ ಬೆಳಗ್ಗೆ ಹೊಳಲ್ಕೆರೆ ಮೀಸೇಕಾಟಪ್ಪ ಜಯಂತಿ ನಗರದಲ್ಲಿರುವ ಮೃತರ ಸ್ವಗೃಹಕ್ಕೆ ಭೇಟಿ‌ ನೀಡಿ ಪುಷ್ಪಹಾರ ಹಾಕಿ ಅಂತಿಮ ನಮನ ಸಲ್ಲಿಸಿದರು.

ಇದೇ ವೇಳೆ ಕುಟುಂಬದ ಸದಸ್ಯರಿಗೆ ಸಾಂತ್ವನ‌ ಹೇಳಿದರು. ಮೃತರ ಅಂತ್ಯ ಸಂಸ್ಕಾರ ಶನಿವಾರ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

About The Author

Leave a Reply

Your email address will not be published. Required fields are marked *