May 3, 2024

Chitradurga hoysala

Kannada news portal

ಬುದ್ಧ ಧಮ್ಮ ದೀಕ್ಷಾ ಉತ್ಸವ ಚಿತ್ರದುರ್ಗದಲ್ಲಿ ಬೈಕ್ ಜಾಥಾ ಆರಂಭಿಸಲಾಯಿತು

1 min read


ಬುದ್ಧ ಧಮ್ಮ ದೀಕ್ಷಾ ಉತ್ಸವ ಚಿತ್ರದುರ್ಗದಲ್ಲಿ ಬೈಕ್ ಜಾಥಾ

ಚಿತ್ರದುರ್ಗ  :

26-10-21ರಂದು ಚಿತ್ರದುರ್ಗದಲ್ಲಿ ಸ್ಟೇಡಿಯಂ ಮುಂಭಾಗದ ಬುದ್ಧ ಪ್ರತಿಮೆ ಬಳಿಯಿಂದ ಬೈಕ್ ಜಾಥಾವನ್ನು ಆರಂಭಿಸಲಾಯಿತು.

ಬುದ್ಧನ ಪ್ರತಿಮೆಯಿಂದ ಆರಂಭವಾಗಿ ಜೋಗಿಮಟ್ಟಿ ರಸ್ತೆ ಗಾಂಧಿ ಸರ್ಕಲ್ ಪ್ರೊಫೆಸರ್ ಬಿ.ಕೃಷ್ಣಪ್ಪ ಸರ್ಕಲ್ ಕೆಳಗೋಟೆ ಮುಖಾಂತರವಾಗಿ ಅಂಬೇಡ್ಕರ್ ಸರ್ಕಲ್ ನಲ್ಲಿ ಸಮಾಪ್ತಿಯಾಯಿತು.

ಜಾಥಾವನ್ನು ಜನಾಂಗದ ಹಿರಿಯರಾದ ಕೆ.ಗೋಪಾಲಕೃಷ್ಣ ಅವರು ಉದ್ಘಾಟಿಸಿದರು ಸಭೆಯನ್ನು ಕುರಿತು ಕೆ ಕುಮಾರ್, ತಮ್ಮಣ್ಣ ಟಿ ರಾಮು, ಬಿಸ್ನಳ್ಳಿ ಜಯಪ್ಪ, ಬಿ ಪಿ ತಿಪ್ಪೇಸ್ವಾಮಿ ಇನ್ನೂ ಮುಂತಾದವರು ಮಾತನಾಡಿದರು.
31-10-21ರ ಧಮ್ಮ ದೀಕ್ಷಾ ಕಾರ್ಯಕ್ರಮಕ್ಕೆ ಜನತೆ ಭಾಗವಹಿಸುವಂತೆ ಹಾಗೂ ದೀಕ್ಷೆ ಪಡೆಯಲು ಅಪೇಕ್ಷಿಸುವವರು ನೋಂದಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಬುದ್ದ ದಮ್ಮ ದೀಕ್ಷಾ ಸಮಿತಿಯ ಸದಸ್ಯರುಗಳು, ಜೈಭೀಮ್ ಯುವಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳು. ಭೀಮ್ ಆರ್ಮಿಯ ಸದಸ್ಯರುಗಳು, ಜಂಬೂದ್ವೀಪದ ಕರ್ನಾಟಕ ಸದಸ್ಯರುಗಳು ಇನ್ನೂ ಮುಂತಾದ ಸದಸ್ಯರುಗಳು ಬೈಕ್ ಜಾಥಾದಲ್ಲಿ ಭಾಗವಹಿಸಿದ್ದರು .

About The Author

Leave a Reply

Your email address will not be published. Required fields are marked *