ಚಂದ್ರವಳ್ಳಿ ಎಸ್.ಜೆ.ಎಂ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸ
1 min read
ಚಂದ್ರವಳ್ಳಿ ಎಸ್.ಜೆ.ಎಂ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸ
ಚಂದ್ರವಳ್ಳಿ ಎಸ್.ಜೆ.ಎಂ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವನ್ನು ಸಂಭ್ರಮವಾಗಿ ಆಚರಿಸಲಾಯಿತು ಎಸ್.ಜೆ.ಎಂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಸಿ ರಮೇಶ್ ರವರು ಮಾತನಾಡಿ ನಮ್ಮ ಕನ್ನಡ ನಾಡು ಭವ್ಯ ಪರಂಪರೆ ಹಾಗೂ ಸಾಂಸ್ಕ್ರತಿಕ ಸೊಬಗು ಹೊಂದಿದೆ ಅನೇಕ ಕವಿಗಳ ನಲೆಬೀಡಾಗಿದೆ ಐತಿಹಾಸಿಕ ಪ್ರಾಚೀನ ಸ್ಮಾರಕಗಳನ್ನು ಹೊಂದಿರುವುದು ಸಾಕ್ಷಿಯಾಗಿದೆ ಕನ್ನಡ ನಾಡು ನುಡಿಯನ್ನು ಪ್ರೀತಿಸಿ ಮೊದಲ ಅದ್ಯತೆ ನೀಡಬೇಕಾಗಿದೆ ಅನ್ಯ ಭಾಷೆಯನ್ನು ದ್ವೇಷಿಸಭಾರದು ಎಲ್ಲರೊಂದಿಗೆ ಸಹೋದರತ್ವ ಭಾವನೆ ಬೆಳಸಿಕೊಳ್ಳಬೇಕು ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂದು ಕುವೆಂಫು ಹೇಳಿರುವುದು ಎಲ್ಲರಿಗೂ ತಿಳಿದು ಕೊಳ್ಳಬೇಕಾಗಿದೆ ಎಂದು ತಿಳಿಸಿದರು ವೇದಿಕೆಯಲ್ಲಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಹೆಚ್ ಪಂಚಾಕ್ಷರಿ ಹಾಗೂ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು ಕಾಲೇಜಿನ ಅಧೀಕ್ಷಕಾರಾದ ಕೆ.ಟಿ ಕೇಶವಮೂತಿ್ ಸ್ವಾಗತಿಸಿದರು ಡಾ.ರೇವಣ್ಣ ವಂದಿಸಿದರು