ಇಂದು ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠದಲ್ಲಿ : ಜ್ಞಾನದ ಬೆಳಕು ಚಿಂತನ ಮಂಥನ: ಕಾರ್ಯಕ್ರಮ, ದಿವ್ಯ ಸಾನಿಧ್ಯ , ಶ್ರೀ ಬಸವ ಹರಳಯ್ಯ ಸ್ವಾಮೀಜಿ
1 min readಜ್ಞಾನದ ಬೆಳಕು ಚಿಂತನ ಮಂಥನ: ಕಾರ್ಯಕ್ರಮ, ದಿವ್ಯ ಸಾನಿಧ್ಯ , ಶ್ರೀ ಬಸವ ಹರಳಯ್ಯ ಸ್ವಾಮೀಜಿ
ಹಿರಿಯೂರು:ಐಮಂಗಲ
ತಾಲೂಕಿನ ಐಮಂಗಲದಲ್ಲಿರುವ ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠದಲ್ಲಿ ಡಿಸೆಂಬರ್ 2ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಜ್ಞಾನದ ಬೆಳಕು ಚಿಂತನ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಹರಳಯ್ಯ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು. ಸಾಹಿತಿ ಪಗಡಲಬಂಡೆ ನಾಗೇಂದ್ರಪ್ಪ, ನಂಜುಂಡಸ್ವಾಮಿ, ಹಾಸ್ಯ ಸಾಹಿತಿ ಜಗನ್ನಾಥ್, ಎಂ ಡಿ ಕೋಟೆ ಗ್ರಾಮ ಪಂಚಾಯತಿ ಸದಸ್ಯರಾದ ನಿರಂಜನ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸು ವಂತೆ ಕಾರ್ಯಕ್ರಮ ಸಂಯೋಜಕರು ಮನವಿ ಮಾಡಿದ್ದಾರೆ.