ಸಳೀಯ, ಸರಳರಾದ ನವೀನ್ಗೆ ಮತ ಹಾಕಿ ಸೇವೆ ಪಡೆಯಿರಿ…ಹೊರಗಿನ ಅಭ್ಯರ್ಥಿಗೆ ಏಕೆ ಮತ ನೀಡುತ್ತೀರಿ: ಚಂದಪ್ಪ
1 min read
ಸಳೀಯ, ಸರಳರಾದ ನವೀನ್ಗೆ ಮತ ಹಾಕಿ ಸೇವೆ ಪಡೆಯಿರಿ…ಹೊರಗಿನ ಅಭ್ಯರ್ಥಿಗೆ ಏಕೆ ಮತ ನೀಡುತ್ತೀರಿ: ಚಂದಪ್ಪ
ಹೊಳಲ್ಕೆರೆ:
ಚಿತ್ರದುರ್ಗ ಜಿಲ್ಲೆಯಲ್ಲಿ ದುಡ್ಡಿದ್ದವರು ಯಾರು ಬೇಕಾದರು, ಹೊರಗಿನವರು ಯಾರು ಬೇಕಾದರೂ ಸ್ಪರ್ಧೆ ಮಾಡಬಹುದಾಗಿದೆ, ಹೊರಗಿನ ತಮಿಳು ನಾಡು ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಏಕೆ ಮತ ನೀಡುತ್ತೀರಿ, ಸ್ಥಳೀಯರಾದ ಕೆ.ಎಸ್.ನವೀನ್ ಮತ ಹಾಕಿ ಸೇವೆ ಪಡೆಯಿರಿ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮನವಿ ಮಾಡಿದ್ದಾರೆ.
ಹೊಳಲ್ಕೆರೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಬಿರುಸಿನ ಮತಯಾಚನೆ ಮಾಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಈಗಾಗಲೇ 2 ಸಲ ಹೊರಗಿನ ರಘುಆಚಾರ್ ಅವರನ್ನು ಗೆಲ್ಲಿಸಿದ್ದೀರಿ, ಅವರು ಎಷ್ಟು ಸಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ, ಸ್ಥಳೀಯವಾಗಿರುವ ಅಭ್ಯರ್ಥಿ ನವೀನ್ ಮತ ನೀಡಿ ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಪಡೆದುಕೊಳ್ಳಿ ಎಂದರು.
ಕಾಂಗ್ರೆಸ್ ಪಕ್ಷ ಹೊರಗಿನವರಾದ ಹಣವಂತರಿಗೆ ಟಿಕೆಟ್ ನೀಡುತ್ತಿದೆ. ಹಣ ಬಲದಿಂದ ಗೆದ್ದು ಹೋದವರು ಮತ್ತೆ ಮುಂದಿನ ಚುನಾವಣೆಗೆ ಅವರು ಇತ್ತ ಕಡೆ ಮುಖ ತೋರಿಸುತ್ತಾರೆ. ಇಂತಹ ಅಭ್ಯರ್ಥಿಗಳನ್ನು ಗೆಲ್ಲಿಸಿ ಜಿಲ್ಲೆಯನ್ನು ಅನಾಥ ಮಾಡುವುದು ಬೇಡ ಎಂದು ಮತದಾರರಲ್ಲಿ ಶಾಸಕ ಚಂದ್ರಪ್ಪನವರು ಮನವಿ ಮಾಡಿದರು.ದೂರದ ವ್ಯಕ್ತಿಗಳನ್ನು ಗೆಲ್ಲಿಸಿದರೆ ಅಲ್ಲಿಗೆ ನೀವ್ಯಾರು ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲ, ಹಣ ಆಮಿಷಕ್ಕೆ ಮತ ನೀಡಬೇಡಿ ಕಷ್ಟ-ಸುಃಖಗಳಿಗೆ ಸ್ಪಂದಿಸಿ ಕೆಲಸ ಮಾಡುವ ಸ್ಥಳೀಯವಾಗಿ ಲಭ್ಯವಾಗುವಂತ ಅಭ್ಯರ್ಥಿ ನವೀನ್ ಮತ ನೀಡಿ ಗೆಲ್ಲಿಸಿ ಎಂದು ಕರೆ ನೀಡಿದರು.
ಹೊಳಲ್ಕೆರೆ ತಾಲೂಕಿನ ತಾಳ್ಯ, ಗುಂಡೇರಿ, ವಿಶ್ವನಾಥಹಳ್ಳಿ, ನಾರಾಯಣಗೊಂಡನಹಳ್ಳಿ, ಗಂಗಸಮುದ್ರ, ಬಿದರಕೆರೆ, ತುಪ್ಪದಹಳ್ಳಿ, ನುಲೇನೂರು, ಮಲ್ಲಾಡಿಹಳ್ಳಿ, ಶಿವಪುರ ಮತ್ತಿರ ಗ್ರಾಪಂಗಳ ವ್ಯಾಪ್ತಿಯಲ್ಲಿ ಶಾಸಕರು ಬಿರುಸಿನ ಪ್ರಚಾರ ಮಾಡಿ ಬಿಜೆಪಿ ಅಭ್ಯರ್ಥಿ ನವೀನ್ ಪರ ಮತಯಾಚನೆ ಮಾಡಿದರು.ಜಿಪಂ ಮಾಜಿ ಸದಸ್ಯ ಮಹೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಮಾಧುರಿ ಗಿರೀಶ್, ತಾಳ್ಯ ಜಿಪಂ ಉಸ್ತುವಾರಿ ದಾಸನಹಟ್ಟಿ ರಮೇಶ್, ಚಿತ್ರಹಳ್ಳಿ ದೇವಣ್ಣ, ದಗ್ಗೆ ಶಿವಪ್ರಕಾಶ್, ಪಿ.ಆರ್.ಶಿವಕುಮಾರ್, ಯುವರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.