ಕಣದಿಂದ ಹಿಂದೆ ಸರಿದ ಡಾ:ಶ್ರೀನಾಥ್ ಜೆ.ರಾಜು ಬೇತೂರುಪಾಳ್ಯ ಆಯ್ಕೆ ಬಹುತೇಕ ಖಚಿತ
1 min readಚಿತ್ರದುರ್ಗ ಹೊಯ್ಸಳ ನ್ಯೂಸ್:
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನದ ಚುನಾವಣೆ ಸಮೀಪಿಸಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಸ್ಪರ್ಧಿಸಿದ್ದ ಜೆ. ರಾಜು ಬೇತೂರುಪಾಳ್ಯ ಅವರ ಹಾದಿ ಸುಗಮವಾಗಿದೆ. ಚುನಾವಣೆಯಲ್ಲಿ ರಾಜು ಪರವಾದ ಅಲೆ ಸೃಷ್ಟಿಯಾಗಿ, ಸಮುದಾಯದ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಪ್ರಚಾರದುದ್ದಕ್ಕೂ ರಾಜುಗೆ ಜನ ಬೆಂಬಲ ಸಿಕ್ಕಿತ್ತು. ಜಿಲ್ಲೆಯ ಸಮುದಾಯದ ಜನ ರಾಜು ಅವರನ್ನ ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ರು. ಈ ನಡುವೆ ರಾಜುಗೆ ಸ್ಪರ್ಧಿಯಾಗಿದ್ದ ಅಭ್ಯರ್ಥಿ ಡಾ. ಶ್ರೀನಾಥ್ ಕೊನೆ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ್ ನಡೆಸಿದ ಮಾತುಕತೆ ಬಳಿಕ ಡಾ. ಶ್ರೀನಾಥ್ ಸ್ಪರ್ದೆಯಿಂದ ಹಿಂದೆ ಸರಿದಿದ್ದು, ಪ್ರಬಲ ಅಭ್ಯರ್ಥಿ ಜೆ. ರಾಜು ವಿಜಯದ ಹಾದಿ ಸುಗಮವಾಗಿದೆ. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯೋದಾಗಿ ಡಾ. ಶ್ರೀನಾಥ್ ಘೋಷಣೆ ಮಾಡಿದ್ರು. ಇದ್ರಿಂದ ಜೆ. ರಾಜು ಬೇತೂರುಪಾಳ್ಯ ಗೆಲುವಿಗೆ ಇನ್ನೋಂದು ಹೆಜ್ಜೆ ಬಾಕಿ ಉಳಿದಿದ್ದು, ಪ್ರಚಾರ ಮತ್ತಷ್ಟು ಬಿರುಸುಗೊಳಿಸಿದ್ದಾರೆ.
ಈ ಬೆಳವಣಿಗೆಯಿಂದ ಚಿತ್ರದುರ್ಗ ಜಿಲ್ಲಾ ಒಕ್ಕಲಿಗ ಸಮುದಾಯದಲ್ಲಿದ್ದ ಆಂತರಿಕ ಸಂಘರ್ಷ ಮರೆಯಾಗಿದ್ದು, ಸಮುದಾಯದಲ್ಲಿ ಒಗ್ಗಟ್ಟು ಮೂಡಿದೆ. ಜೊತೆಗೆ ಜೆ. ರಾಜು ಬೇತೂರುಪಾಳ್ಯ ಅವರ ಆಯ್ಕೆ ಬಹುತೇಕ ಖಚಿತಗೊಂಡಿದ್ದು,ಔಪಚಾರಿಕವಾಗಿ ಚುನಾವಣೆ ನಡೆಯಬೇಕಾಗಿದೆ.
ಚುನಾವಣೆ ಭಾನುವಾರ ನಡೆಯಲಿದ್ದು, ಕೊನೆ ಹಂತದ ಪ್ರಚಾರ ಬಿರುಸುಗೊಂಡಿದೆ. ಜೆ. ರಾಜು ಬೇತೂರುಪಾಳ್ಯ ಅವರಿಗೆ ಎಲ್ಲಾ ಕಡೆ ವ್ಯಾಪಕ ಬೆಂಬಲ ಸಿಕ್ಕಿದ್ದು, ಹೋದ ಕಡೆಯಲ್ಲೆಲ್ಲಾ ಜನ ಅದ್ಧೂರಿ ಸ್ವಾಗತ ಕೋರಿ ಮತ ನೀಡಿ ಗೆಲ್ಲಿಸುವ ಅಭಯ ನೀಡಿದ್ದಾರೆ. ಜಿಲ್ಲೆಯಾದ್ಯಂತ ರಾಜು ಬೇತೂರುಪಾಳ್ಯ ಪರ ಅಲೆ ಸೃಷ್ಟಿಯಾಗಿದ್ದು, ಗೆಲುವಿಗೆ ಸಮೀಪ ಬಂದು ನಿಂತಿದ್ದಾರೆ.