April 29, 2024

Chitradurga hoysala

Kannada news portal

ನಾಳೆ ಮಾದಿಗ ಸಮುದಾಯದ ನೂತನ ಐ.ಪಿ.ಎಸ್ ಆಧಿಕಾರಿಗಳಿಗೆ ಅಭಿನಂದನಾ ಸಮಾರಂಭ

1 min read




ಮಾದಿಗ ಸಮುದಾಯದ ನೂತನ ಐ.ಪಿ.ಎಸ್ ಆಧಿಕಾರಿಗಳಿಗೆ ಅಭಿನಂದನಾ ಸಮಾರಂಭ

_________________
ಚಿತ್ರದುರ್ಗ:
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ವತಿಯಿಂದ ಮಾದಿಗ ಸಮುದಾಯದ ನೂತನ ಐ.ಪಿ.ಎಸ್ ಆಧಿಕಾರಿಗಳಾದ ಆರ್.ಜಯಪ್ರಕಾಶ್, ಡಾ.ಬಿ.ಟಿ.ಕವಿತಾ ಮತ್ತು ಎಂ.ರಾಜೀವ್ ಇವರನ್ನು ಅಭಿನಂದಿಸುವ ಸಲುವಾಗಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ನಾಳೆ 02/01/2022 ರ ಭಾನುವಾರ ಬೆಳಿಗ್ಗೆ 10:3೦ಕ್ಕೆ ಚಿತ್ರದುರ್ಗ ನಗರದ ತ.ರಾ.ಸು ರಂಗಮಂದಿರದಲ್ಲಿ ಕಾರ್ಯಕ್ರಮ ಸಾನಿಧ್ಯ: ಶ್ರೀಬಸವ ಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ. ಸಮ್ಮುಖ:ಐಮಂಗಲ ಶ್ರೀ ಮಹಾಶರಣ ಬಸವ ಹರಳಯ್ಯ ಸ್ವಾಮೀಜಿ. ಕರ್ನಾಟಕ ಸರ್ಕಾರದ ಬೃಹತ್ ನೀರಾವರಿ ಸಚಿವರು ಹಾಗು ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳರವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸತ್ ಸದಸ್ಯರಾದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಂಜುನಾಥ್, ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷರು ಹಾಗು ಶಾಸಕರಾದ ಎಂ.ಚಂದ್ರಪ್ಪ, ಶಾಸಕರು ಮತ್ತು ಮಾಜಿ ಸಚಿವರಾದ ಗೂಳಿಹಟ್ಟಿ ಡಿ.ಶೇಖರ್, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ಶಾಸಕರಾದ ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಕರ್ನಾಟಕ ಸರ್ಕಾರದ ಅಪರ ಕಾರ್ಯದರ್ಶಿ ಹಾಗು ಮಾದಾರ ಚನ್ನಯ್ಯ ಗುರುಪೀಠದ ಆಡಳಿತಾಧಿಕಾರಿಯಾದ ಬಿ.ಎಚ್.ಅನಿಲ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.

About The Author

Leave a Reply

Your email address will not be published. Required fields are marked *