May 3, 2024

Chitradurga hoysala

Kannada news portal

ಪದ್ಮಶ್ರೀ ಪ್ರಶಸ್ತಿ ಪಡೆದ ಶ್ರೀ ಕೇಶವಮೂರ್ತಿ ಅವರಿಗೆ ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಅಭಿನಂದನೆ

1 min read



ಪದ್ಮಶ್ರೀ ಪ್ರಶಸ್ತಿ ಪಡೆದ ಶ್ರೀ ಕೇಶವಮೂರ್ತಿ ಅವರಿಗೆ ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಅಭಿನಂದನೆ

ಚಿತ್ರದುರ್ಗ ಹೊಯ್ಸಳ ನ್ಯೂ ಸ್ /ಚಿತ್ರದುರ್ಗ,

ಚಿತ್ರದುರ್ಗ, ಜ.26, ದೇಶದ ಪ್ರತಿಷ್ಠಿತ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಶಿವಮೊಗ್ಗ ಜಿಲ್ಲೆಯ ಮತ್ತೂರು ಹೊಸಹಳ್ಳಿಯ ಗಮಕ ಕಲಾವಿದರಾದ  ಎಚ್. ಆರ್.ಕೇಶವಮೂರ್ತಿ ಅವರಿಗೆ ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕೇಶವಮೂರ್ತಿ ಅವರು  ಕಳೆದ ನಾಲ್ಕೈದು ದಶಕಗಳಿಂದ ರಾಜ್ಯ,ದೇಶದ ಅನೇಕ ಕಡೆಗಳಲ್ಲಿ ತಮ್ಮ ವಿದ್ವತ್ ಕಲೆಯನ್ನು ಗೋಷ್ಠಿಗಳಲ್ಲಿ ಪ್ರಚುರ ಪಡಿಸಿದ್ದಾರೆ.ಹಾಗೆಯೇ ನಮ್ಮ ಚಿತ್ರದುರ್ಗಕ್ಕೂ ಅನೇಕ ಸಾರಿ ಬಂದು ಗಮಕ ವಾಚನವನ್ನು ನಡೆಸಿಕೊಟ್ಟಿದ್ದು ಇದೆ. ಇವರ ಕಲೆಯ ಪ್ರಾವೀಣ್ಯತೆ ಗಮನಿಸಿ ಉನ್ನತ ಪ್ರಶಸ್ತಿ ಲಭಿಸಿರುವುದು ಗಮಕ ಕಲಾಭಿಮಾನಿಗಳಲ್ಲಿ ಮತ್ತಷ್ಟು ಉರುಪು ಬಂದಿದೆ. ಕುಮಾರವ್ಯಾಸ ಪ್ರಶಸ್ತಿ ಸಂದ ಸಂದರ್ಭದಲ್ಲಿ ಚಿತ್ರದುರ್ಗದ ವತಿಯಿಂದ ಅವರ ಊರಿಗೆ ಹೋಗಿ ಗೌರವಿಸಲಾಯಿತು ಎಂದು ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷರಾದ ಶ್ರೀ ಮತಿ ರಮಾದೇವಿವೆಂಕಣ್ಣಾಚಾರ್ ಸ್ಮರಿಸಿಕೊಂಡಿದ್ದಾರೆ.ಅವರ ಶಿಷ್ಯರಾದ ಚಂಪಕಾಶ್ರೀಧರ್ ಅವರೂ ಸಹ ನೆಚ್ಚಿನ ಗುರುಗಳಿಗೆ ಸಂದ ಗೌರವ ಇಡೀ ಗಮಕ ಕಲಾಭಿಮಾನಿಗಳಿಗೆ ಸಿಕ್ಕಷ್ಟು ಸಂತೋಷವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

70229 27455

About The Author

Leave a Reply

Your email address will not be published. Required fields are marked *