ಭಾರತೀಯ ಸಂವಿಧಾನದಲ್ಲಿ ಸಮಾನತೆಗೆ ಮೊದಲ ಪ್ರಾಶಸ್ತ್ಯ : ಕಾರ್ಯದರ್ಶಿ ಯೋಗೀಶ್ ಸಹ್ಯಾದ್ರಿ.
1 min read
ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಿಟಿ ವತಿಯಿಂದ 73ನೇ ಗಣರಾಜ್ಯೋತ್ಸವ ಆಚರಣೆ
ಭಾರತೀಯ ಸಂವಿಧಾನದಲ್ಲಿ ಸಮಾನತೆಗೆ ಮೊದಲ ಪ್ರಾಶಸ್ತ್ಯ : ಕಾರ್ಯದರ್ಶಿ ಯೋಗೀಶ್ ಸಹ್ಯಾದ್ರಿ.
ಚಿತ್ರದುರ್ಗ ಹೊಯ್ಸಳ ನ್ಯೂಸ್ / ಚಿತ್ರದುರ್ಗ. ಚಿತ್ರದುರ್ಗ : ಭಾರತೀಯ ಸಂವಿಧಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಹಾಗು ಸಾರ್ವಕಾಲಿಕವಾದುದು. ಅದರಲ್ಲಿಯೂ ಪ್ರಜಾಪ್ರಭುತ್ವ ಮತ್ತು ಸಮಾನತೆಗೆ ಮೊದಲ ಪ್ರಾಶಸ್ತ್ಯವನ್ನು ನೀಡಿರುವ ಏಕೈಕ ರಾಷ್ಟ್ರ ನಮ್ಮ ಹೆಮ್ಮೆಯ ಭಾರತ ಎಂದು ಉಪನ್ಯಾಸಕ ಹಾಗು ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಿಟಿಯ ಕಾರ್ಯದರ್ಶಿ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಇರುವ ಲಯನ್ಸ್ ಕ್ಲಬ್ ಕಛೇರಿಯಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವ ಆಚರಣೆ ಕುರಿತು ಲಯನ್ ಯೋಗೀಶ್ ಸಹ್ಯಾದ್ರಿ ಮಾತನಾಡಿ, ದೇಶದ ಯುವಕರು ಸೇರಿದಂತೆ ಪ್ರತಿಯೊಬ್ಬ ನಾಗರೀಕರು ಹೆಮ್ಮೆ ಪಡುವಂತಹ ಅಮೋಘ ಸಂವಿಧಾನವನ್ನು ನೀಡಿರುವ ಹೆಗ್ಗಳಿಕೆ ನಮ್ಮ ಸಂವಿಧಾನ ಶಿಲ್ಪಿ ಡಾ| ಬಿ ಆರ್ ಅಂಬೇಡ್ಕರ್ ಹಾಗು ಅಂದಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲುತ್ತದೆ ಎಂದರು. ಇಡೀ ದೇಶವನ್ನು ಒಗ್ಗೂಡಿಸಿ ಬ್ರಿಟೀಷರಿಂದ ಸ್ವಾತಂತ್ರ್ಯ ತಂದುಕೊಟ್ಟು ಸಮಾನತೆಯನ್ನು ಜಗತ್ತಿಗೆ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಮ್ಮ ಬದುಕಿಗೆ ದಾರಿದೀಪವಾಗಬೇಕು ಎಂದು ತಿಳಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಆರ್ ಉದಯಶಂಕರ್ ಭಾರತೀಯರಾಗಿ ಜನಿಸಿದ ನಾವೆಲ್ಲರೂ ಧನ್ಯರು ಹಾಗು ಪ್ರತಿಯೊಬ್ಬರೂ ನಮ್ಮ ದೇಶದ ಸಂವಿಧಾನ, ಕಾನೂನುಗಳನ್ನು ಅರಿತುಕೊಂಡು ಗೌರವಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ ಆರ್ ಉದಯಶಂಕರ್, ಕಾರ್ಯದರ್ಶಿ ಲಯನ್ ಯೋಗೀಶ್ ಸಹ್ಯಾದ್ರಿ, ಖಜಾಂಚಿ ಲಯನ್ ಪಿ ನಾಗೇಂದ್ರಚಾರ್, ಸಹಕಾರ್ಯದರ್ಶಿ ಲಯನ್
ದಾದಾಪೀರ್, ಸದಸ್ಯರಾದ ಲಯನ್ ಗಿರೀಶ್ ಯು, ಲಯನ್ ಬಿ ಮಂಜುನಾಥ್, ಲಯನ್ ಚಲ್ಮೇಶ್, ಲಯನ್ ಸೋಮನಾಥ ಶೆಟ್ಟಿ, ಲಿಯೋ ತನ್ಮಯ್ ಇನ್ನಿತರರು ಉಪಸ್ಥಿತರಿದ್ದರು.