ನಮ್ಮನೀರು ನಮ್ಮ ಹಕ್ಕು ಐತಿಹಾಸಿಕ ಮೇಕೆದಾಟು ಪಾದಯಾತ್ರೆಯಲ್ಲಿ ಚಿತ್ರದುರ್ಗದ ಮಠಾಧೀಶರು.
1 min read
ನಮ್ಮನೀರು ನಮ್ಮ ಹಕ್ಕು ಐತಿಹಾಸಿಕ ಮೇಕೆದಾಟು ಪಾದಯಾತ್ರೆಯಲ್ಲಿ ಚಿತ್ರದುರ್ಗದ ಮಠಾಧೀಶರು.
ಬೆಂಗಳೂರು:
ನಮ್ಮನೀರು ನಮ್ಮ ಹಕ್ಕು ಐತಿಹಾಸಿಕ ಮೇಕೆದಾಟು ಪಾದಯಾತ್ರೆಯ ಕೊನೆಯ ದಿನ ಗುರುವಾರ ಚಿತ್ರದುರ್ಗದ ಮಠಾಧೀಶರಾದ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಕುರುಬ ಸಮಾಜದ ಶ್ರೀ ಈಶ್ವರಾನಂದ ಸ್ವಾಮೀಜಿ ಕುಂಚಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಭೋವಿ ಗುರುಪೀಠದ ಇಮ್ಮಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಯಾದವ ಮಠದ ಶ್ರೀ ಯಾದವನಂದ ಸ್ವಾಮೀಜಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಮಾದ್ಯಮ ವಕ್ತಾರರಾದ ಬಿಎನ್ ಚಂದ್ರಪ್ಪ, ಮಾಜಿ ಶಾಸಕರಾದ ಗೋವಿಂದಪ್ಪ, ಶಾಸಕರಾದ ರಘುಮೂರ್ತಿ ಮಾಜಿ ವಿಧಾನಪರಿಷತ್ ಸದಸ್ಯರಾದ ಎಂಸಿ ವೇಣುಗೋಪಾಲ್, ಶಾಸಕರಾದ ವೆಂಕಟರಮಣಪ್ಪ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ , ಮುಖಂಡ ಸೋಮಶೇಖರ್ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಹಾಲೇಶ್ ಸೇರಿದಂತೆ ಅನೇಕ ಮುಖಂಡರು ಪಾದಯಾತ್ರೆಯಲ್ಲಿ ಪರಮಪೂಜ್ಯರೊಂದಿಗೆ ಹೆಜ್ಜೆ ಹಾಕಿದರು.