April 26, 2024

Chitradurga hoysala

Kannada news portal

ಬೈಕ್‍ಗೆ ಖಾಸಗಿ ಬಸ್ಸ ಡಿಕ್ಕಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು : ಮಾಜಿ ಸಚಿವ ಆಂಜನೇಯ ಬೇಟಿ ಸಂತಾಪ

1 min read




ಬೈಕ್‍ಗೆ ಖಾಸಗಿ ಬಸ್ಸ ಡಿಕ್ಕಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು

ಮಾಜಿ ಸಚಿವ ಆಂಜನೇಯ,  ಸಂತಾಪ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಹೊಳಲ್ಕೆರೆ:
ಬೈಕ್‍ಗೆ ಖಾಸಗಿ ಬಸ್ ಡಿಕ್ಕಿ ಒಂದೇ ಕುಟುಂಬದ ನಾಲ್ವರು ಸಾವು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿ ಅಪಘಾತ ಸಂಬಂವಿಸಿದೆ.ಅಪಘಾತದಲ್ಲಿ ನಾಗರಾಜ್ , ವೀರೇಶ್ , ಸಂತೋಷ , ಶೈಲಜ ಗಳು ಮೃತಪಟ್ಟಿದ್ದಾರೆ. ಎಲ್ಲರೂ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿಕೊಂಡು ತಡರಾತ್ರಿ ಸ್ವಗ್ರಾಮಕ್ಕೆ ಬರುತ್ತಿದ್ದ ವೇಳೆ ಚಿತ್ರದುರ್ಗದಿಂದ ಬರುತ್ತಿದ್ದ ಖಾಸಗಿ ಬಸ್‍ವೊಂದು ಓವರ್ ಟೇಕ್ ಮಾಡಿ ಮುನ್ನುಗ್ಗುವಾಗ ಎದುರು ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಇದರಿಂದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು.
ಮಾಜಿ ಸಚಿವ ಎಚ್.ಆಂಜನೇಯ ರವರು ಮೃತರ ಸ್ವಗ್ರಾಮಕ್ಕೆ ತೆರಳಿ ಅಂತಿಮ ದರ್ಶನ ಪಡೆದು ಸಂತಾಪ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ,ರುದ್ರಪ್ಪ,ಓಂಕಾರಸ್ವಾಮಿ,ಜಗಣ್ಣ, ಮಾರುತಿ,ಸುರೇಶ್ ಪಾಡಿಗಟ್ಟೆ ಸೇರಿದಂತೆ ಗ್ರಾಮಸ್ಥರು ಇದ್ದರು

About The Author

Leave a Reply

Your email address will not be published. Required fields are marked *