ವಿದ್ಯಾರ್ಥಿಗಳಿಗೆ ಲಿಂಗದೀಕ್ಷೆ ನೀಡಿದ. ಶ್ರೀ ಬಸವಲಿಂಗ ಮಹಾಸ್ವಾಮಿಗಳು
1 min readಶ್ರೀ ಬಸವಲಿಂಗ ಸ್ವಾಮಿಗಳು ನೂರಾರು ವಿದ್ಯಾರ್ಥಿಗಳಿಗೆ ಲಿಂಗದೀಕ್ಷೆ ನೀಡಿ ಬಸವತತ್ವ ಉಪದೇಶ ಆಶೀರ್ವಚನವನ್ನು ನೀಡಿದರು
ಮೊಳಕಾಲ್ಮೂರು:
ಮೊಳಕಾಲ್ಮೂರು ತಾಲ್ಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಇರುವ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠ ದಲ್ಲಿ ಭಾನುವಾರ ಕಾಯಕಯೋಗಿ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಶ್ರೀಮಠದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ವಿಶ್ವಗುರು ಧರ್ಮಗುರು ಬಸವಣ್ಣನವರ ಮತ್ತು ಇಳಕಲ್ ಡಾ ಪೂಜಶ್ರೀ ಮಹಾಂತ ಶಿವಯೋಗಿಗಳ ಸಂದೇಶದಂತೆ ಶ್ರೀಮಠದ ವಸತಿ ನಿಲಯದ ನೂರಾರು ವಿದ್ಯಾರ್ಥಿಗಳಿಗೆ ಲಿಂಗದೀಕ್ಷೆ ನೀಡಿ ಬಸವತತ್ವ ಉಪದೇಶ ಆಶೀರ್ವಚನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿ ಕಾಂತರಾಜ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ ಭಕ್ತರಾದ ಎಸ್ಪಿ ಲಕ್ಷ್ಮಣ ವೀರೇಶ್ ಮತ್ತಿತರು ಭಾಗವಹಿಸಿದ್ದರು