ಸಿಂಗಾಪುರದ ನಿವೃತ್ತ ಅಬಕಾರಿ ಉಪ ಅಧೀಕ್ಷಕ ಹೆಚ್.ಈಶ್ವರಪ್ಪ ನಿಧನ: ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3-00 ಗಂಟೆಗೆ : ಮಂಜಪ್ಪ.ಎಂ ಬೆಸ್ಕಾಂ ಚಿತ್ರದುರ್ಗ ಸಂತಾಪ
1 min readಡಾ:ಸತೀಶ್ ಇವರ ತಂದೆ ಸಿಂಗಾಪುರದ
ನಿವೃತ್ತ ಅಬಕಾರಿ ಉಪ ಅಧೀಕ್ಷಕ
ಹೆಚ್.ಈಶ್ವರಪ್ಪ ನಿಧನ:
ಮಂಜಪ್ಪ.ಎಂ ಬೆಸ್ಕಾಂ ಚಿತ್ರದುರ್ಗ ಸಂತಾಪ
ಚಿತ್ರದುರ್ಗ:
ಜಿಲ್ಲಾ ಅಸ್ಪತ್ರೆಯ ಹಿರಿಯ ವೈದ್ಯ ಡಾ.ಈ.ಸತೀಶ್ ಅವರ ತಂದೆ ನಿವೃತ್ತ ಅಬಕಾರಿ ಉಪ ಅಧೀಕ್ಷಕ ಮತ್ತು ಬಾಬು ಜಗಜೀವನ್ ರಾಮ್ ಕ್ರೆಡಿಟ್ ಕೋ ಆಪರೇಟಿ ಸೊಸೈಟಿಯ ಅಧ್ಯಕ್ಷರಾಗಿಯು ಸೇವೆಸಲ್ಲಿಸಿದ್ದ.ಹೆಚ್.ಈಶ್ವರಪ್ಪ ಸುಮಾರ 88 ವಯೋಸಹಜ ಅನಾರೋಗ್ಯದಿಂದ ಬುಧವಾರ ಮಧ್ಯಾನ್ಹ 3:40 ಕ್ಕೆ ನಿಧನರಾಗಿದ್ದಾರೆ.
ಚಿತ್ರದುರ್ಗದ ಬೇಸ್ಕಾಂ ಇಲಾಖೆಯ ಹಿರಿಯ ಆಕೌಂಟೆಟ್ ಮಂಜಪ್ಪ ಇವರು ಈಶ್ವರಪ್ಪ ನಿಧನಕ್ಕೆ ತೀವರ ಸಂತಾಪ ಸೂಚಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಸಿಂಗಾಪುರ ಗ್ರಾಮದ ವಾಸಿಯಾಗಿದ್ದ ಇವರು ಪ್ರಸ್ತುತ ನಗರದ ಜೆಸಿಆರ್ ಬಡಾವಣೆಯ ಎರಡನೇ ಕ್ರಾಸ್ ನಲ್ಲಿ ವಾಸವಾಗಿದ್ದರು.ಮೃತರಿಗೆ ಪುತ್ರರಾದ ಡಾ.ಸತೀಶ್ ಮತ್ತು ಓರ್ವ ಪುತ್ರಿ ಇದ್ದಾರೆ. ಅಂತ್ಯಕ್ರಿಯೆಯನ್ನು ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಗುರುವಾರ ಮಧ್ಯಹನ 3-00 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.