ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಂಶೋಧನೆ ಸಂಸ್ಥೆಯಿಂದ ಜುಲೈ 27ರಂದು ಉಚಿತ ತಪಾಸಣೆ ಶಿಬಿರ
1 min readವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಂಶೋಧನೆ ಸಂಸ್ಥೆಯಿಂದ ಜುಲೈ 27ರಂದು ಉಚಿತ ತಪಾಸಣೆ ಶಿಬಿರ
ಚಿತ್ರದುರ್ಗ ಹೊಯ್ಸಳ ಸುದ್ದಿ:
ಮೊಳಕಾಲ್ಮುರು :
ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಂಶೋಧನೆ ಸಂಸ್ಥೆ ಕೊಡಿನಟ್ಟರ್ ಜಿ ಮಂಜುನಾಥ್
ಪತ್ರಿಕಗೋಷ್ಠಿಯಲ್ಲಿ ಮಾತನಾಡಿದರು.
ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಂಶೋಧನೆ ಸಂಸ್ಥೆ ಕೊಡಿನಟ್ಟರ್ ಜಿ. ಮಂಜುನಾಥ್ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ವಯಸ್ಸಿನ ವ್ಯತ್ಯಾಸಗಳು ಇಲ್ಲದೆ ಜನರಿಗೆ ರೋಗಳು ಕಾಣಿಸಿಕೊಳ್ಳುತ್ತವೆ, ಕ್ಯಾನ್ಸರ್ ರೋಗ ಪೀಡಿತರನ್ನು ಸಮಾಜವು ಹೀನಾಯವಾಗಿ ಕಾಣುತ್ತದೆ,ಈ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಜನರಲ್ಲಿ ತಪ್ಪು ಕಲ್ಪನೆ ಇದೆ ಆದ್ರೆ ಕಾಲ ಬದಲಾಗಿದೆ ವೈಜ್ಞಾನಿಕವಾಗಿ ಹಲವಾರು ಸಂಶೋಧನೆ ನಡೆದು ಕ್ಯಾನ್ಸರ್ ಗುಣಪಡಿಸಲಾಗಿದೆ ಈ ನಿಟ್ಟಿನಲ್ಲಿ ಮೊಳಕಾಲ್ಮುರು ಪಟ್ಟಣ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಜುಲೈ 27ರಂದು ಜಿಲ್ಲಾಅರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಮತ್ತು ವಿಶ್ವರಾಧ್ಯ ಕ್ಯಾನ್ಸರ್ ಸಂಶೋಧನೆ ಸಂಸ್ಥೆ ವಿಶೇಷ ತಜ್ಞರ ತಂಡದಿಂದ ಉಚಿತ ತಪಾಸಣೆ ಶಿಬಿರವನ್ನು
ನಡೆಸಿ ಕೊಡಲಾಗುವುದು ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದ್ದರು.