ಚಿಕ್ಕಬೇನ್ನೂರು ಗ್ರಾಮ ಪಂಚಾಯತಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆ: ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಹರ್ಷ.
1 min readಚಿಕ್ಕಬೇನ್ನೂರು ಗ್ರಾಮ ಪಂಚಾಯತಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆ:
ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಹರ್ಷ.
ವರದಿ:ಭರತ್ ಭಾರ್ಗವ್
ಚಿತ್ರದುರ್ಗ ಹೊಯ್ಸಳ:
ಚಿಕ್ಕಬೇನ್ನೂರು/ಚಿತ್ರದುರ್ಗ:
ಗ್ರಾಮ ಪಂಚಾಯಿತಿಗೆ ಬುದುವಾರ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಚುನಾವಣಾ ಅಧಿಕಾರಿ ಯಾದ ಜಯಶೀಲಾರೆಡ್ಡಿ ಇವರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಮಂಜುಳಾಅಂಜೀನಪ್ಫ ಉಪಾಧ್ಯಕ್ಷರಾಗಿ ಕೆಂಚನಗೌಡ್ ಆಯ್ಕೆಯಾಗಿದ್ದಾರೆ ಎಸ್ ಸಿ ಮಹಿಳೆ ಹಾಗೂ ಸಮಾನ್ಯ ಪುರುಷ ಮೀಸಲಾತಿ ಬಂದ ಕಾರಣ ಇವರ ಇವರನ್ನು ಅವಿರೋಧವಾಗಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಆಯ್ಕೆ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಹರ್ಷ
ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಗು ಕಾಂಗ್ರೆಸ್ ಮುಖಂಡರಾದ ಬಿ.ಕೆ.ವಿಜಯಕುಮಾರ್, ಮಾತಾಡಿ ಗ್ರಾಮದ ಎಲ್ಲಾ ಮುಖಂಡರು ಸೇರಿ ಇವರನ್ನು ಆಯ್ಕೆ ಮಾಡಿದ್ದೇವೆ, ಗ್ರಾಮ ಪಂಚಾಯಿತಿಯಲ್ಲಿ ಇರುವ ಕುಂದುಕೊರತೆಗಳನ್ನು ನಿವಾರಿಸಿ, ಒಳ್ಳೆಯ ಕೆಲಸವನ್ನು ಮಾಡಲಿ ಎಂದು ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಾಂತ ಪ್ರಶಾಂತ್, ಮಾಜಿ ಸದಸ್ಯ ಸುರೇಶ್, ಹಾಲಿ ಸದಸ್ಯರುಗಾಳದ ವೆಂಕಟೇಶ, ಗುರುಮೂರ್ತಿ, ತಿಮ್ಮಪ್ಪ ,ಬಸವರಾಜಪ್ಪ, ಕುಬೇರಪ್ಪ, ಮುಖಂಡರುಗಳಾದ ದ್ಯಾಮಣ್ಣ ಕಲ್ಕುಂಟೆ ಶೇಖರಪ್ಪ,ತಿಪ್ಪೇಸ್ವಾಮಿ, ಕುಮಾರ್ ರಂಗನಾಥ, ಕಲ್ಲೇಶಿ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತಿ ಇದ್ದರು.