May 3, 2024

Chitradurga hoysala

Kannada news portal

ಜನ ಕವಿ ಡಾ.ಸಿದ್ದಲಿಂಗಯ್ಯ ಸ್ಮರಣೆ : ಮಾಜಿ ಸಚಿವ ಹೆಚ್ ಆಂಜನೇಯ ಅವರ ಅಧ್ಯಕ್ಷತೆಯಲ್ಲಿ ಸ್ಮರಿಸುತ್ತಿರುವುದು ಅರ್ಥಪೂರ್ಣ ವಾಗಿದೆ

1 min read

ಜನ ಕವಿ ಡಾ.ಸಿದ್ದಲಿಂಗಯ್ಯ ಸ್ಮರಣೆ

(ಬೆಂಗಳೂರಿನ ಗಾಂಧಿ ಭವನದಲ್ಲಿಂದು  ಕಾರ್ಯಕ್ರಮ) _____________________

ನಾಡಿನ ಸಾಕ್ಷಿ ಪ್ರಜ್ಞೆ, ದನಿ ಇಲ್ಲದವರ ಧ್ವನಿಯಾಗಿದ್ದ ಕವಿ ಡಾ.ಸಿದ್ದಲಿಂಗಯ್ಯ ಅವರನ್ನು ಸ್ಮರಿಸುವ ಈ ಕಾರ್ಯಕ್ರಮದಲ್ಲಿ ನಾಡಿನ ಮುಖ್ಯಮಂತ್ರಿ ಭಾಗವಹಿಸುತ್ತಿರುವುದು ಅಲ್ಲದೇ ಅವರ ಬಗೆಗಿನ ವಿಚಾರ ಧಾರೆಗಳನ್ನ ಇಂದಿನ ಪೀಳಿಗೆಯ ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಕಾರ್ಯಕ್ರಮ ಆಯೋಜಕರು ಹೊತ್ತಿರುವುದು ಹೆಮ್ಮೆಯ ವಿಷಯವಾಗಿದೆ . ಕನ್ನಡದ ಪ್ರಸಿದ್ಧ ಲೇಖಕರಲ್ಲೊಬ್ಬರು.

‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಡಾ. ಸಿದ್ಧಲಿಂಗಯ್ಯ ನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ತಮ್ಮ ಲೇಖನೀಯ ಮೂಲಕ ಕಾವ್ಯ, ಸಾಹಿತ್ಯಗಳನ್ನು ರಚಿಸಿದ್ದರು. ಮಾತ್ರವಲ್ಲದೆ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು.

ಅಲ್ಲದೆ ರಾಜ್ಯದಲ್ಲಿ ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದವರು. ಅಧ್ಯಾಪನ ಮತ್ತು ಬರವಣಿಗೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರು.

*ಡಾ. ಸಿದ್ದಲಿಂಗಯ್ಯ ಅವರ ಜೀವನ ಪಯಣ*

ಡಾ.ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ
ಜಿಲ್ಲೆ ಮಾಗಡಿ ತಾಲ್ಲೋಕಿನ ಮಂಚನಬೆಲೆ ಗ್ರಾಮದಲ್ಲಿ
1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ
ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ
ಸಿದ್ದಲಿಂಗಯ್ಯ ನವರ ವಿದ್ಯಾಕೇಂದ್ರವಾಗಿತ್ತು. ಆ
ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗೆ
ರೂಡಿಯಾಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು
ಉತ್ತಮ ಭಾಷಣಕಾರರಾಗಿದ್ದು, ಡಾ ಬಿಅರ್ ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ
ವಿಚಾರಧಾರೆಗಳಿಂದ ಬಹು ಆಕರ್ಷಿತರಾಗಿದ್ದರು.

*ಡಾ.ಸಿದ್ದಲಿಂಗಯ್ಯ ನವರ ಕೃತಿಗಳು*

ಇವರ ಪಿ.ಎಚ್ ಡಿ ಸಂಶೋಧನಾ ಪ್ರಬಂಧ •ಗ್ರಾಮ
ದೇವತೆಗಳು, (1997)

*ಕವನ ಸಂಕಲನಗಳು* :-

• ಹೊಲೆ ಮಾದಿಗರ ಹಾಡು [1975]
• ಮೆರವಣಿಗೆ, (2000) •ಸಾವಿರಾರು ನದಿಗಳು ( 1979 )
• ಕಪ್ಪು ಕಾಡಿನ ಹಾಡು(1983) •ಆಯ್ದಕವಿತೆಗಳು(1997) • ಅಲ್ಲೆಕುಂತವರೆ ನನ್ನ ಜನಗಳು ಮತ್ತು ಇತರ
ಕವಿತೆಗಳು (2005) •ಸಮಕಾಲೀನ ಕನ್ನಡ ಕವಿತೆ
ಭಾಗ-3, 4 (ಸಂಪಾದನೆ ಇತರರೊಂದಿಗೆ), 2003.

*ವಿಮರ್ಶನಾ ಕೃತಿಗಳು*:-

• ಹಕ್ಕಿ ನೋಟ ( 1991) ರಸಗಳಿಗೆಗಳು.
ಎಡಬಲ. ಉರಿಕಂಡಾಯ (2009)
*ಲೇಖನಗಳ ಸಂಕಲನ*
•ಅವತಾರಗಳು [1991] ಸದನದಲ್ಲಿ ಸಿದ್ದಲಿಂಗಯ್ಯ
ಭಾಗ-1(1996) ಭಾಗ- 2 (2004) •ಜನಸಂಸ್ಕೃತಿ( 2007)

*ನಾಟಕಗಳು*:-

• ಏಕಲವ್ಯ(1986) •ನೆಲಸಮ( 1980)
• ಪಂಚಮ(1980). *ಆತ್ಮಕಥೆ*:-
•ಊರುಕೇರಿ- ಭಾಗ-1 (1997)
ಭಾಗ-2 (2006)

*ಗೌರವ, ಪ್ರಶಸ್ತಿಗಳು*:-

• ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ
ಸರ್ಕಾರ ಪ್ರಶಸ್ತಿ(1984) •ರಾಜ್ಯೋತ್ಸವ ಪ್ರಶಸ್ತಿ
-ಕರ್ನಾಟಕ ಸರ್ಕಾರ(1986) •ಡಾ.ಅಂಬೇಡ್ಕರ್
ಶತಮಾನೋತ್ಸವ ವಿಶೇಷ ಪ್ರಶಸ್ತಿ( 1992) • ಕರ್ನಾಟಕ
ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -(1996) • ಜಾನಪದ
ತಜ್ಞ ಪ್ರಶಸ್ತಿ -(2001) 2 •ಎರಡು ಬಾರಿ ಕರ್ನಾಟಕ ರಾಜ್ಯ
ವಿಧಾನ ಪರಿಷತ್ ಸದಸ್ಯ •ಸಂದೇಶ್ ಪ್ರಶಸ್ತಿ (2001)
• ಡಾ.ಅಂಬೇಡ್ಕರ್ ಪ್ರಶಸ್ತಿ (2002) • ಸತ್ಯಕಾಮ ಪ್ರತಿಷ್ಠಾನ
ಪ್ರಶಸ್ತಿ (2002) •ಬಾಬುಜಗಜೀವನರಾಮ್ ಪ್ರಶಸ್ತಿ (2005) • ನಾಡೋಜ ಪ್ರಶಸ್ತಿ (2007) • ಪ್ರೆಸಿಡೆನ್ಸಿ
ಇನ್ಷಿಟ್ಯೂಷನ್ ಪ್ರಶಸ್ತಿ(2012)
• ಆಳ್ವಾಸ್ ನುಡಿಸಿರಿ ಪ್ರಶಸ್ತಿ ( 2012)
• ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ
ಸಮ್ಮೇಳನದ ಅಧ್ಯಕ್ಷರು •ನೃಪತುಂಗ ಪ್ರಶಸ್ತಿ (2018)
• ಪಂಪ ಪ್ರಶಸ್ತಿ(2019)

ಇಷ್ಟೇಲ್ಲಾ ಸಾಧನೇಯ ಶಿಖರವೆರಿದರು ಧಣಿವರಿಯದ ಕವಿಯಾಗಿ ,ದಲಿತ , ಬಂಡಾಯಗಾರನಾಗಿ ಕನ್ನಡ ನಾಡಿನ ಪ್ರ”ಬುದ್ಧ” ವಾಗ್ಮಿ ಯಾಗಿದ್ದ .

ಸಿದ್ದಲಿಂಗಯ್ಯ ನವರನ್ನು ಮಾಜಿ ಸಚಿವ ಹೆಚ್ ಆಂಜನೇಯ ಅವರ ಅಧ್ಯಕ್ಷತೆಯ ಕರ್ನಾಟಕ ಆದಿಜಾಂಬವ ಸಾಂಸ್ಕೃತಿಕ ಸಮಿತಿಯು ಇಂದು ಸ್ಮರಿಸುತ್ತಿರುವುದು ಅರ್ಥಪೂರ್ಣ ವಾಗಿದೆ.
_______ *******_______

ಸಿ.ಎನ್.ಕುಮಾರ್,
ಸಂಪಾದಕ,
ಚಿತ್ರದುರ್ಗಹೊಯ್ಸಳ
ದಿನಪತ್ರಿಕೆ.

About The Author

Leave a Reply

Your email address will not be published. Required fields are marked *