ರಾಂಪುರದಲ್ಲಿ ಅಯುಷ್ಮಾನ್ ಭವ ಅರೋಗ್ಯ ಮೇಳ ಮತ್ತು ಆಯುಷ್ ಮೇಳ ಕಾರ್ಯಕ್ರಮ
1 min readರಾಂಪುರದಲ್ಲಿ ಅಯುಷ್ಮಾನ್ ಭವ ಅರೋಗ್ಯ ಮೇಳ ಮತ್ತು ಆಯುಷ್ ಮೇಳ ಕಾರ್ಯಕ್ರಮ
ಚಿತ್ರದುರ್ಗಹೊಯ್ಸಳ ನ್ಯೂಸ್/
ಮೊಳಕಾಲ್ಮುರು :
ರಾಂಪುರ ಗ್ರಾಮದಲ್ಲಿ ಅರೋಗ್ಯ ಸಮುದಾಯದ ಆವರಣದಲ್ಲಿ ಅಯುಷ್ಮಾನ್ ಭವ ಅರೋಗ್ಯ ಮೇಳ ಮತ್ತು ಆಯುಷ್ ಮೇಳ ಕಾರ್ಯಕ್ರಮ ನಡೆಯಿತು ಜಿಲ್ಲಾ ಅರೋಗ್ಯಧಿಕಾರಿಗಳ ಕಚೇರಿ ತಾಲ್ಲೂಕು ಅರೋಗ್ಯ ಅಧಿಕಾರಿಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕರಾದ ಎನ್ ವೈ ಗೋಪಾಲ ಕೃಷ್ಣ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅರೋಗ್ಯ ಯೋಜನೆಗಳನ್ನು ಎಲ್ಲ ವರ್ಗದ ಜನತೆಗೆ ತಲುಪಿಸುವ ಉದ್ದೇಶದಿಂದ ಕೇಂದ್ರ ಅರೋಗ್ಯ ಮಂತ್ರಾಲಯ ಅಯುಷ್ಮಾನ್ ಭವ ಹಾಗೂ ಅರೋಗ್ಯ ಯೋಜನೆ ಪ್ರಯೋಜನ ಗ್ರಾಮೀಣ ಭಾಗದ ಕೊನೆಯ ಜನರಿಗೆ ತಲುಪುವಂತೆ ಮಾಡಲು ಅಯುಷ್ಮಾನ್ ಮೇಳ ಈ ಯೋಜನೆ ಎಲ್ಲ ಅರ್ಹಪಲಾನುಭವಿಗಳಿಗೆ ಅರೋಗ್ಯ ಸೇವೆ ಲಭಿಸುವಂತೆ ಮಾಡುವ ಉದ್ದೇಶದಿಂದ ಅಭಿಯಾನ ಮಾದರಿಯಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಅರೋಗ್ಯ ಯೋಜನೆಗಳ 100%ವ್ಯಾಪ್ತಿಯನ್ನು ಸಾದಿಸಲು ಅಯುಷ್ಮಾನ್ ಭವ ಅರೋಗ್ಯ ಸಚಿವಾಲಯವು ಅಯುಷ್ಮಾನ್ ಭವ ಆಯುಷ್ ಮೇಳ ಮತ್ತು ಅಯುಷ್ಮಾನ್ ಗ್ರಾಮ ನಂತಹ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ನಾಗರಿಕರಿಗೆ ಆವರ ಆದಾಯ ಅಥವಾ ಸಾಮಾಜಿಕ ಸ್ಥಾನಮನವನ್ನು ಲೆಕ್ಕಿಸದೆ ಗುಣಾತ್ಮಕ ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ಅರೋಗ್ಯ ವನ್ನು ಒದಗಿಸಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಅರೋಗ್ಯ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದ್ದರು.ಈ ಕಾರ್ಯಕ್ರಮ ಸಂಧರ್ಭದಲ್ಲಿ ವೈದ್ಯಧಿಕಾರಿಗಳಾದ ಡಾ. ಮಧುಕುಮಾರ್ ವೈದ್ಯರಾದ ಸುರೇಂದ್ರ ಬಾಬು ಹಾಗೂ ಮುಖಂಡರಾದ ವಿಜಯ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.