ಹೊರಗಿನ ತಿಂಡಿ ತಿನಿಸುಗಳನ್ನು ಬಳಸಬೇಡಿ:ಎಸ್ಪಿ ರಾಧಿಕಾ ಸೂಚನೆ
1 min readಚಿತ್ರದುರ್ಗ ಜಿಲ್ಲೆಯಲ್ಲಿ ಒಂದೇ ದಿನ ಕೋವಿಡ್ 416 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಅತಿ ಎಚ್ಚರಿಕೆ ವಹಿಸಬೇಕು, ಹೊರಗಿನ ಪಾನಿಪುರಿ ಹೊರಗಿನ ಊಟ, ತಿಂಡಿ ತಿನ್ನಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಸೂಚನೆ ನೀಡಿದರು.
ಅವರು ಇಲ್ಲಿನ ವಸತಿ ಗೃಹದಲ್ಲಿ ಹಣ್ಣಿನ ಗಿಡ ಮರಗಳನ್ನು ನೆಟ್ಟು ಪರಿಸರ ಮಾಲಿನ್ಯ ಕಾಪಾಡಿ ಎಂದು ಜಾಗೃತಿ ಮೂಡಿಸಿ ಮಾತನಾಡಿದರು. ವಸತಿ ಗೃಹದಲ್ಲಿ ಯಾವುದೇ ಸಾರ್ವಜನಿಕರ ಸಂಪರ್ಕ ಇಲ್ಲದಿದ್ದರೂ ಎಚ್ಚರವಹಿಸಬೇಕು. ಕೋವಿಡ್ ಸೋಂಕು ಬಾರದಂತೆ ಎಚ್ಚರವಹಿಸುವುದು ಉತ್ತಮ. ಕಷಾಯ ಮಾಡಿ ನಿತ್ಯ ಕುಡಿಯಲು ಸೂಚಿಸಿದ ಅವರು ನೆಲನಲ್ಲಿ, ಅಮೃತ ಬಳ್ಳಿ ನೈಸರ್ಗಿಕವಾಗಿ ಲಭ್ಯವಾಗುತ್ತಿದ್ದು ಅದರ ಕಷಾಯ ಕುಡಿಯುವುದುರಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಕ್ಕಳು ಮತ್ತು ವಯೋವೃದ್ಧರಿಗೆ ಮನೆಯಲ್ಲಿ ಸ್ಟೀಮ್(ನೀರಿನ ಆವಿ) ತೆಗೆದುಕೊಳ್ಳಬೇಕು. ಇದರಿಂದ ಆರೋಗ್ಯಕ್ಕೆ ತುಂಬಾ ಅನುಕೂಲವಾಗಲಿದೆ ಅಲ್ಲದೆ ಕೋವಿಡ್ ಸೋಂಕಿನಿಂದ ದೂರ ಉಳಿಯಲು ಸಾಧ್ಯ ಎಂದು ತಿಳಿಸಿದರು.
ಮದುವೆ ಸಂಭ್ರಮ, ಪ್ರವಾಸ, ದೂರದ ಪ್ರಯಾಣ, ದೇವರ ದರ್ಶನ, ಮಾರುಕಟ್ಟೆ ಹೋಗುವಂತ ಕಾರ್ಯಗಳನ್ನು ಮುಂದೂಡಬೇಕು. ಕೋವಿಡ್ ಲಸಿಕೆ ಕಂಡು ಹಿಡಿಯುವ ತನಕ ಎತ್ತರವಹಿಸಬೇಕು.
ಎಸ್ಪಿ, ಡಿವೈಎಸ್ಪಿ, ಸಿಪಿಐ, ಎಸ್ಐ, ಪೊಲೀಸ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು