ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟುವುದು ಎಲ್ಲರ ಜವಾಬ್ದಾರಿ-ಬಿ.ಮೂಗಪ್ಪ
1 min readಚಿತ್ರದುರ್ಗ, ಅಕ್ಟೋಬರ್14:
ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರು ತಪ್ಪದೇ ಮಾಸ್ಕ್ ಧರಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಸಲಹೆ ನೀಡಿದರು.
ಚಿತ್ರದುರ್ಗ ನಗರದ ನೆಹರು ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಪಿ ಅಂಡ್ ಟಿ ಕ್ವಾಟ್ರಸ್ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಲಸಿಕಾ ಕಾರ್ಯಕ್ರಮ ಮೇಲ್ವಿಚಾರಣೆ ಮಾಡಿ ಅವರು ಮಾತನಾಡಿದರು.
ಲಸಿಕಾ ಕೇಂದ್ರಕ್ಕೆ ಬರುವಾಗ ಫಲಾನುಭವಿಗಳಿಗೆ ಕೇಂದ್ರದ ಮುಂಭಾಗದಲ್ಲಿ ಒಂದು ಬಕೆಟ್ ನೀರನ್ನು ಇಟ್ಟುಕೊಂಡು ಸೋಪಿನಿಂದ ಕೈ ತೊಳೆಯುವ ವಿಧಾನವನ್ನು ಇನ್ನೂ ಮುಂದೆ ತಪ್ಪದೇ ಪಾಲಿಸುವಂತೆ ಪ್ರಾಯೋಗಿಕವಾಗಿ ಮಾಡಿಸಿ ಮಾಹಿತಿ ನೀಡಿದರು.
ಉತ್ತಮ ಗುಣಮಟ್ಟದ ಲಸಿಕೆಗಳನ್ನು ಆರೋಗ್ಯ ಇಲಾಖೆಯಿಂದ ಫಲಾನುಭವಿಗಳಿಗೆ ನೀಡುತ್ತಿದ್ದು, ಯಾವುದೇ ಫಲಾನುಭವಿಯು ಲಸಿಕೆ ವಂಚಿತರಾಗದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಸಲಹೆ ಪಡೆದು ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು. ಅಡ್ಡಪರಿಣಾಮಗಳು ಬಂದಾಗ ಅನುಸರಿಸುವ ವಿಧಾನಗಳನ್ನು ಫಲಾನುಭವಿಗಳಿಗೆ ತಿಳಿಸಿದರು.
ಇನ್ನೂ ಮುಂದೆ ನಾವು ಕೊರೊನಾ ರೋಗದ ಜೊತೆಗೆ ಬದುಕುವ ಸ್ಥಿತಿ ಇರುವುದರಿಂದ ಹೆಚ್ಚಿನ ಕಾಳಜಿ ವಹಿಸುತ್ತಾ ಸ್ವಚ್ಛತೆಯ ಕಡೆಗೆ ಆದ್ಯತೆ ನೀಡುವುದು ಒಳಿತು. ಸ್ವಚ್ಛತೆ ಎಲ್ಲಿದೆಯೋ ಅಲ್ಲಿ ಮಾತ್ರ ಆರೋಗ್ಯವನ್ನು ಕಾಣಬಹುದು ಎಂದರು.
ಈ ಸಂದರ್ಭದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ವೀಣಾ, ಅಂಗನವಾಡಿ ಕಾರ್ಯಕರ್ತೆ ಮುಬಾಶಿರ ಹಾಗೂ ಫಲಾನುಭವಿಗಳು ಹಾಜರಿದ್ದರ