ರಾಮಮಂದಿರ ನಿರ್ಮಾಣಕ್ಕೆ ಶಾಸಕ ಜೆ.ಹೆಚ್.ತಿಪ್ಪಾರೆಡ್ಡಿ 11.11.111 ರೂ ದೇಣಿಗೆ.
1 min readಚಿತ್ರದುರ್ಗ: ರಾಮಮಂದಿರ ನಿರ್ಮಾಣಕ್ಕೆ ಎಲ್ಲಾರೂ ಸಹ ತಮ್ಮ ಕೈಲಾದ ಸಹಾಯ ಮಾಡಿ ಐತಿಹಾಸಿಕ ಮಂದಿರ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ರಾಮಮಂದಿರ ನಿರ್ಮಾಣಕ್ಕೆ 11 ಲಕ್ಷದ 11 ಸಾವಿರದ 111 ರೂ ದೇಣಿಗೆಯನ್ನು ಶಾಸಕರು ನೀಡಿದರು. ಈ ಸಂದರ್ಭದಲ್ಲಿ ಶಾಸಕರ ಪುತ್ರ ಸಿದ್ದಾರ್ಥ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬದರಿನಾಥ್ ಮತ್ತು ಪಕ್ಷದ ಮತ್ತು ಸಂಘ ಪರಿವಾರದವರು ಹಾಜರಿದ್ದರು.