May 8, 2024

Chitradurga hoysala

Kannada news portal

ಕಬೀರಾನಂದಾಶ್ರದ ಮಹಾ ಶಿವರಾಜ್ ಮಹೋತ್ಸವದ ಅಧ್ಯಕ್ಷರಾಗಿ ನಗರಸಭೆ ಸದಸ್ಯ ಉದ್ಯಮಿ ಬಿ.ವೆಂಕಟೇಶ್ ಆಯ್ಕೆ.

1 min read

ಚಿತ್ರದುರ್ಗ ಫೆ. ೧೬
ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ಮಾ. ೫ ರಿಂದ ೧೧ರವರೆಗೆ ನಡೆಯುವ ೯೧ನೇ ಮಹಾಶಿವರಾತ್ರಿ ೨೦೨೧ರ ಮಹೋತ್ಸವದ ಅಧ್ಯಕ್ಷರಾಗಿ ನಗರಸಭೆ ಸದಸ್ಯರು ಹಾಗೂ ವಾಣಿಜ್ಯೋಧ್ಯಮಿಗಳಾದ ಬಿ.ವೆಂಕಟೇಶ್‌ರವರನ್ನು ಆಯ್ಕೆಮಾಡಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಈ ಸಂಬಂಧ ಸದ್ಗುರು ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ಶ್ರೀ ಮಠದಲ್ಲಿ ನಡೆದ ಸಭೆಯಲ್ಲಿ ಬಿ. ವೆಂಕಟೇಶ್‌ರವರನ್ನು ಸರ್ವಾನುಮತದಿಂದ ಆಯ್ಕೆಮಾಡುವುದರೊಂದಿಗೆ ಮಹೋತ್ಸವದ ಯಶಸ್ವಿಗೆ ಜವಾಬ್ದಾರಿಗಳನ್ನು ನೀಡಲಾಯಿತು. ಸದ್ಭಕ್ತರು ಉತ್ಸವದ ಯಶಸ್ವಿಗೆ ಸಹಕರಿಸಲು ಕೊರಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ಬಿ. ವೆಂಕಟೇಶ್‌ರವರು ಮಾತನಾಡಿ ಈ ಬಾರಿಯ ಮಹಾಶಿವರಾತ್ರಿ ಮಹೋತ್ಸವ ವಿಶೇಷ ಮತ್ತು ವಿಭಿನ್ನತೆಯನ್ನು ಚಿತ್ರದುರ್ಗದ ಜನತೆಗೆ ತಲುಪುವಂತೆ ಮಾಡಲು ಪ್ರಯತ್ನಿಸುತ್ತೇನೆಂದು ತಿಳಿಸಿದರು.
ಸಭೆಯಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿಯವರು ನೂತನ ಅಧ್ಯಕ್ಷರನ್ನು ಅನುಮೊದಿಸಿದರು. ಕಾರ್ಯದರ್ಶಿ ವಿ.ಎಲ್. ಪ್ರಶಾಂತ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಓಂಕಾರ್ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *