April 26, 2024

Chitradurga hoysala

Kannada news portal

ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲವೆಂಬುದೆ ನಂಬಲುತೊಡರನಾಳು ವಿಜಯ್ ,ಚಿತ್ರದುರ್ಗ

1 min read

ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲವೆಂಬುದೆ ನಂಬಲು ಅಸಾಧ್ಯ ,
ಕೊರೋನ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಕವಿ,ಸಾಹಿತಿ, ಬಂಡಾಯಕವಿ , ದಲಿತ ಕವಿ, ಡಾ.ಸಿದ್ದಲಿಂಗಯ್ಯ (67) ಚಿಕಿತ್ಸೆ ಫಲಕಾರಿಯಾಗದೇ, ಸಾವನ್ನಪ್ಪಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಶ್ರೇಷ್ಟ ಕೊಂಡಿಯೊಂದು ಕಳಚಿದಂತೆ ಆಗಿದೆ.
ಈ ಸಂದರ್ಭದಲ್ಲಿ ಅವರ ಅನುಯಾಯಿಯಾಗಿ,ಅವರನ್ನು ಇಷ್ಟಪಡುವ ವ್ಯಕ್ತಿಯಾಗಿ, ಡಾ.ಸಿದ್ದಲಿಂಗಯ್ಯ ಅವರ ಬದುಕಿನ ಸಾಧನೆಗಳನ್ನು ಸಂಗ್ರಹಿಸಿ ,ಓದುಗರಿಗೆ ಒದಗಿಸುವ ಆಸೆಯೊಂದಿಗೆ ನಾನು ಕಡಿಮೆ ವೇಳೆಯಲ್ಲಿ ಸಂಗ್ರಹಿದ, ಡಾ.ಸಿದ್ಧಲಿಂಗಯ್ಯ ನವರ ಬದುಕಿನ ಸಂಕ್ಷಿಪ್ತ ಅವಲೋಕನ ,….. _______________ ಡಾ.ಸಿದ್ದಲಿಂಗಯ್ಯ ನವರು ಕನ್ನಡದ ಪ್ರಸಿದ್ಧ ಲೇಖಕರಲ್ಲೊಬ್ಬರು. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು. ಮತ್ತು ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದವರು. ಅಧ್ಯಾಪನ ಮತ್ತು ಬರವಣಿಗೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದವರು.
• *ಜೀವನ ಪಯಣ*:-
ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೋಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಸಿದ್ದಲಿಂಗಯ್ಯ ನವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗೆ ರೂಡಿಯಾಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದುಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.

• ಕೃತಿಗಳು
-ಪಿ.ಎಚ್ ಡಿ ಸಂಶೋಧನಾಪ್ರಬಂಧ – ಗ್ರಾಮ ದೇವತೆಗಳು, 1997

• *ಕವನ ಸಂಕಲನಗಳು:*-

* ಹೊಲೆ ಮಾದಿಗರ ಹಾಡು, 1975
* ಮೆರವಣಿಗೆ, 2000
* ಸಾವಿರಾರು ನದಿಗಳು, 1979
* ಕಪ್ಪು ಕಾಡಿನ ಹಾಡು, 1983
* ಆಯ್ದಕವಿತೆಗಳು, 1997
* ಅಲ್ಲೆಕುಂತವರೆ
* ನನ್ನ ಜನಗಳು ಮತ್ತು ಇತರ ಕವಿತೆಗಳು, 2005
* ಸಮಕಾಲೀನ ಕನ್ನಡ ಕವಿತೆ ಭಾಗ-3, 4 (ಸಂಪಾದನೆ ಇತರರೊಂದಿಗೆ), 2003

• *ವಿಮರ್ಶನಾ ಕೃತಿಗಳು*

* ಹಕ್ಕಿ ನೋಟ, 1991
* ರಸಗಳಿಗೆಗಳು
* ಎಡಬಲ
* ಉರಿಕಂಡಾಯ, 2009

• *ಲೇಖನಗಳ ಸಂಕಲನ*

* ಅವತಾರಗಳು, 1991
* ಸದನದಲ್ಲಿ ಸಿದ್ದಲಿಂಗಯ್ಯ ಭಾಗ * 1, 1996
* ಸದನದಲ್ಲಿ ಸಿದ್ದಲಿಂಗಯ್ಯ ಭಾಗ * 2, 2004
* ಜನಸಂಸ್ಕೃತಿ, 2007

• *ನಾಟಕಗಳು*

* ಏಕಲವ್ಯ, 1986
* ನೆಲಸಮ, 1980
* ಪಂಚಮ, 1980

• *ಆತ್ಮಕಥೆ*

* ಊರುಕೇರಿ- ಭಾಗ-1, 1997
* ಊರುಕೇರಿ- ಭಾಗ-2, 2006

• *ಗೌರವ, ಪ್ರಶಸ್ತಿಗಳು*

* ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984
* ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-1986
* ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ 1992
* ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996
* ಜಾನಪದ ತಜ್ಞ ಪ್ರಶಸ್ತಿ -2001
* 2 ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ.
* ಸಂದೇಶ್ ಪ್ರಶಸ್ತಿ -2001
* ಡಾ.ಅಂಬೇಡ್ಕರ್ ಪ್ರಶಸ್ತಿ -2002
* ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -2002 * ಬಾಬುಜಗಜೀವನರಾಮ್ ಪ್ರಶಸ್ತಿ -2005
* ನಾಡೋಜ ಪ್ರಶಸ್ತಿ -2007
* ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -2012
* ಆಳ್ವಾಸ್ ನುಡಿಸಿರಿ ಪ್ರಶಸ್ತಿ -2012
* ಶ್ರವಣಬೆಳಗೊಳ ದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
* ನೃಪತುಂಗ ಪ್ರಶಸ್ತಿ 2018
* ಪಂಪ ಪ್ರಶಸ್ತಿ – 2019. ಇಷ್ಟೇಲ್ಲಾ ಸಾಧನೇಯ ಶಿಖರವೆರಿದರು ಧಣಿವರಿಯದ ಕವಿಯಾಗಿ ,ದಲಿತ ,ಬಂಡಾಯಗಾರನಾಗಿ ನನ್ನ ಕಣ್ಣ ಮುಂದೆ ಬಂದು ಹೋದರು,… ಆದರೆ ನಾನು ಎಂ ಜಯಣ್ಣ ನವರ ನುಡಿ ನಮನ ಸಭೆಯಲ್ಲಿ ಸಿದ್ದಲಿಂಗಯ್ಯ ನವರ ಜೊತೆಯಲ್ಲಿ ಆತ್ಮೀಯವಾಗಿ ಮಾತನಾಡುವ ,ಜೊತೆಯಲ್ಲಿಯೇ ಊಟ ಮಾಡುವ ಭಾಗ್ಯವನ್ನು ಮಾಜಿ ಸಚಿವ ಹೆಚ್ ಆಂಜನೇಯ ರವರಿಂದ ನನ್ನದಾಗಿತ್ತು. ****************** ತೊಡರನಾಳು ವಿಜಯ್ ,ಚಿತ್ರದುರ್ಗ

About The Author

Leave a Reply

Your email address will not be published. Required fields are marked *