April 26, 2024

Chitradurga hoysala

Kannada news portal

*ಕೇಂದ್ರ,ರಾಜ್ಯ ಸರ್ಕಾರಗಳು ಸಾಮಾನ್ಯ ಜನರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿವೆ:ಡಿ ಯಶೋಧರ*

1 min read
ಕೇಂದ್ರ,ರಾಜ್ಯ ಸರ್ಕಾರಗಳು ಸಾಮಾನ್ಯ ಜನರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿವೆ:                   ಡಿ. ಯಶೋಧರ

ಹಿರಿಯೂರು :

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೆ ಏರಿಸುವ ಮೂಲಕ ಜನ ಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿವೆ ಎಂದು ಜೆ.ಡಿ. ಎಸ್. ಜಿಲ್ಲಾಧ್ಯಕ್ಷರಾದ ಡಿ. ಯಶೋಧರ ಹೇಳಿದರು.

ತಾಲೂಕು ಜೆ.ಡಿ.ಎಸ್ ವತಿಯಿಂದ ಸರ್ಕಾರದ ವಿರುದ್ಧಆಯೋಜಿಸಿದ್ದ ಭಾರಿ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಸರ್ಕಾರ ತಕ್ಷಣ ಪೆಟ್ರೋಲ್, ಡೀಸೇಲ್, ಅಡಿಗೆ ಅನಿಲ ,ರಸಗೊಬ್ಬರ, ವಿದ್ಯುತ್, ಹಾಗೂ ದಿನ ನಿತ್ಯದ ದಿನಸಿ ಬೆಲೆಗಳನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು. ಜೆ.ಡಿ.ಎಸ್.ಹಿರಿಯ ಮುಖಂಡರಾದ ಎಂ.ಜಯ್ಯಣ್ಣ ಮಾತನಾಡಿ ಜನ ಸಾಮಾನ್ಯರಿಗೆ ಸ್ಪಂದಿಸಬೇಕಾದ ಸರ್ಕಾರ ಗಳು ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂದರು.

ಬಿಇ.ಓ ಕಛೇರಿ ಮುಂಭಾಗದಿಂದ ತಾಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡಿಸಿ ತಹಶೀಲ್ದಾರ್ ಎನ್ ಶಿವಕುಮಾರ್ ರವರಿಗೆ ಮನವಿ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ಜೆ.ಡಿ.ಎಸ್.ಮುಖಂಡರಾದ ಮಂಜುನಾಥ್, ಶಿವಶಂಕರ್,ಸೈಯದ್ ಸಲಾವುದ್ದೀನ್,ವಿಠ್ಠಲ್ ಪಾಂಡುರಂಗ,ಹನುಮಂತರಾಯಪ್ಪ ,ಜಯಕುಮಾರ್ ,ಶಹಾಬುದ್ದೀನ್ ,ಸಾದಿಕ್,ಅಲ್ತಾಫ್,ಫಾರುಖ್,ರಂಗನಾಥ್ ,ಮುದ್ದಣ್ಣ, ಕಿರಣ್, ನಿಜಾಮ್, ಪ್ರಸನ್ನ,ಆಬಿದ್ ಹುಸೇನ್,ಜಲ್ದಪ್ಪ ,ರಂಗಸ್ವಾಮಿ,ಜಗದೀಶ್ ,ಕರ್ಣ, ಮುಂತಾದವರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *