ವಿಜಯ ಕರ್ನಾಟಕ ವರದಿಗಾರ ರಾಮು ಮುದಿಗೌಡ ಸ್ಥಳದಲ್ಲೇ ಸಾವು,
1 min readವಿಜಯ ಕರ್ನಾಟಕ ವರದಿಗಾರ ರಾಮು ಮುದಿಗೌಡ ಸ್ಥಳದಲ್ಲೇ ಸಾವು, ಸಹೋದರಿಯ ಶವ ತೆಗೆದುಕೊಂಡು ಹೋಗುವಾಗ ನಡೆದಿರುವ ದುರಂತ…..
ಹಿರಿಯೂರು:
ಯಾರ ಸಾವು ಹೇಗೆ ಬರುತ್ತದೆ ಎನ್ನುವುದನ್ನು ಯಾರಿಂದಲೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ, ಸಹೋದರಿ ರೇಣುಕಾ ಅಪಘಾತದಲ್ಲಿ ಬ್ರೈನ್ ಗೆ ತೀವ್ರ ಪೆಟ್ಟಿ ಬಿದ್ದಿದ್ದರಿಂದ ಕಳೆದ ಮೂರು ದಿನಗಳಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ಅವರ ಕಳೆಬರ ಹೊತ್ತ ಆಂಬುಲೆನ್ಸ್ ಮುಂದೆ ಸಾಗುತ್ತಿತ್ತು. ಆಂಬುಲೆನ್ಸ್ ಹಿಂಭಾಗ ಮತ್ತೊಂದು ಕಾರಿನಲ್ಲಿ ಬೆಂಗಳೂರಿನಿಂದ ಹಿರೇಕೆರೂರಿಗೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಹಿರಿಯೂರು ತಾಲೂಕಿನ ಆದಿವಾಲ ಸಮೀಪದಲ್ಲಿ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ಗುರುವಾರ ತಡೆ ರಾತ್ರಿ ಸಂಭವಿಸಿದೆ. ಸಹೋದರ-ಸಹೋದರಿ ಒಂದೇ ದಿನ ಸಾವು ಕಂಡಿರುವುದು ದುರ್ವಿಧಿಯಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪತ್ರಿಕಾ ಬಳಗ ದೇವರಲ್ಲಿ ಪ್ರಾರ್ಥಿಸುತ್ತದೆ.
ಹಿರೇಕೆರೂರು ತಾಲೂಕಿನ ವಿಜಯ ಕರ್ನಾಟಕ ದಿನ ಪತ್ರಿಕೆ ವರದಿಗಾರರಾದ ರಾಮು ಮುದಿಗೌಡ(58)ರವರು ಗುರುವಾರ ತಡ ರಾತ್ರಿ ಹಿರಿಯೂರು ಬಳಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ಮುದಿಗೌಡ ಅವರು ಪ್ರಸ್ತುತ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಹಿರೇಕೆರೂರ ತಾಲೂಕು ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಹಿರೇಮೊರಬ ಗ್ರಾಮದ ವಿಎಸ್ಎಸ್ ಬ್ಯಾಂಕ್ ಅಧ್ಯಕ್ಷರಾಗಿ, ಹಿರೇಕೆರೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು.