ಬಾಲಕಿ ಅತ್ಯಾಚಾರ ಆರೋಪಿ ರಾಜ ಅಲಿಯಾಸ್ ನಾಗರಾಜ ಇಸಾಮುದ್ರ ಗ್ರಾಮದವನೇ ಆರೋಪಿ ಬಂಧನ: ಎಸ್ಪಿ ರಾಧಿಕ.ಜಿ
1 min readಬಾಲಕಿ ಅತ್ಯಾಚಾರ ಆರೋಪಿ ರಾಜ ಅಲಿಯಾಸ್ ನಾಗರಾಜ ಇಸಾಮುದ್ರ ಗ್ರಾಮದವನೇ ಆರೋಪಿ ಬಂಧನ: ಎಸ್ಪಿ ರಾಧಿಕ.ಜಿ
ಚಿತ್ರದುರ್ಗ ●ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೆÇಲೀ ಸ್ ವರಿμÁ್ಠಧಿಕಾರಿ ಜಿ.ರಾಧಿಕಾ ತಿಳಿಸಿದರು.ಅವರು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿ ರಾಜ ಅಲಿಯಾಸ್ ನಾಗರಾಜ ಇಸಾಮುದ್ರ ಗ್ರಾಮದವನೇ ಆಗಿದ್ದಾನೆ. ಈತನನ್ನು ವಶಕ್ಕೆ ಪಡೆದು ಪೆÇಲೀಸರು ವಿಚಾರಣೆ ಮಾಡಿದಾಗ ಅತ್ಯಾಚಾರ, ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆಂದು ಎಸ್ಪಿ ಅವರು ತಿಳಿಸಿದ್ದಾರೆ. ಕೃತ್ಯದ ಹಿನ್ನೆಲೆ: ಆಪಾದಿತ ನಾಗರಾಜನನ್ನು ಕೂಲಂ ಕೂಶವಾಗಿ ವಿಚಾರಣೆ ಮಾಡಿದಾಗ ಸದರಿ ಆಪಾದಿತನು ಮೃತ ಅಪ್ರಾಪ್ತ ಬಾಲಕಿಯ ಮನೆಯ ಪಕ್ಕದಲ್ಲಿಯ ಮನೆಯಲ್ಲಿ ತಾಯಿ ಮತ್ತು ಅಣ್ಣನೊಂದಿಗೆ ವಾಸವಾಗಿದ್ದು, ಮೃತ ಬಾಲಕಿಯು ಸ್ನಾನಕ್ಕೆ ಹೋಗುವಾಗ ಹಾಗೂ ಇನ್ನಿತರೆ ಸಂಧರ್ಭದಲ್ಲಿ ಆಕೆಯನ್ನು ನೋಡಿದ್ದು ಅವಳ ಮೇಲೆ ಈತನಿಗೆ ಇಷ್ಟವಾಗಿರುತ್ತದೆ.
ನಂತರದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದು ಈತನು ದಿನಾಂಕ:23-7-2021 ರಂದು ಮೃತ ಬಾಲಕಿ ಬಹಿರ್ದೆಸೆಗೆ ಒಬ್ಬಳೆ ಹೋಗಿದ್ದನ್ನು ನೋಡಿ ಆಪಾದಿತ ನಾಗರಾಜನು ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದು ಮೃತ ಬಾಲಕಿ ಬಹಿರ್ದೆಸೆಯಿಂದ ವಾಪಾಸ್ ಮನೆಗೆ ಬರುತ್ತಿರುವಾಗ ಯುವತಿಯನ್ನು ಹೊತ್ತುಕೊಂಡು ಮೆಕ್ಕೆಜೋಳದ ಜಮೀನಿನಲ್ಲಿ ಅತ್ಯಾಚಾರ ಎಸಗಿದ್ದಲ್ಲದೆ ಕತ್ತು ಹಿಸುಕಿ ಸಾಯಿಸಿರುತ್ತಾನೆ ಎಂದು ವಿಚಾರಣೆಯಿಂದ ದೃಢಪಟ್ಟಿರುತ್ತೆ ಎಂದು ಎಸ್ಪಿ ತಿಳಿಸಿದ್ದಾರೆ.ಆರೋಪಿಯನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪೆÇಲೀಸ್ ಅಧೀಕ್ಷಕರು ಅಭಿನಂದಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ. ಆರೋಪಿತರ ಪತ್ತೆ ಕಾರ್ಯಕ್ಕಾಗಿ ಪೋಲಿಸ್ ಅಧೀಕ್ಷಕರಾದ ರಾಧಿಕಾ.ಜಿ., ಹೆಚ್ಚುವರಿ ಪೋಲೀಸ್ ಅಧೀಕ್ಷಕ ಮಹಾನಿಂಗ ಬಿ ನಂದಗಾವಿ, ಚಿತ್ರದುರ್ಗ ಉಪವಿಭಾಗದ ಪೆÇಲೀಸ್ ಉಪಾಧೀಕ್ಷಕ ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಜಿಲ್ಲೆಯ 6 ಸಿಪಿಐ ಗಳು, 15 ಪಿಎಸ್ಐಗಳು, ಇನ್ನಿತರೆ 50 ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚನೆ ಮಾಡಿದ್ದನ್ನು ಸ್ಮರಿಸಬಹುದಾಗಿದೆ.