ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ಪ್ರಕಾಶ್ ರಾಮಜೋಗಿ ಹಳ್ಳಿ
1 min readಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ಪ್ರಕಾಶ್ ರಾಮಜೋಗಿ ಹಳ್ಳಿ
ಶಿವಮೂಗ್ಗ :ಅ ೮ : ರಾಜ್ಯ ಕಾರ್ಯ ನಿರತ ಪರ್ತಕರ್ತರ ಸಂಘದ ೨೦೧೯ ನೇ ಸಾಲಿನ ದತ್ತಿ ನಿಧಿ ಪ್ರಶಸ್ತಿಗೆ ಪಾತ್ರವಾದ ವಾರ್ತಾಭಾರತಿ ಪತ್ರಿಕೆಯ ಹಿರಿಯ ವರದಿಗಾರ ಪ್ರಕಾಶ್ ರಾಮ ಜೋಗಿ ಹಳ್ಳಿ ಅವರಿಗೆ ಶುಕ್ರವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಸಚಿವ ಅರಗ ಜ್ನಾನೇಂದ್ರ, ಸಂಸದ ಬಿ. ವೈ. ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.
ಹಾಗೆಯೇ ಡಿ.ವಿ ಜಿ ಪ್ರಶಸ್ತಿಗೆ ಪಾತ್ರರಾದ ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗಡೆ ನೀಡಿ ಗೌರವಿಲಾಯಿತು. ಹಾಗೆಯೇ ಗರುಡನಗಗಿರಿ ಪ್ರಶಸ್ತಿಯನ್ನು ಮಂಜುನಾಥ್ ಅವರಿಗೆ, ಜಯಶೀಲರಾವ್ ಪ್ರಶಸ್ತಿ ಯನ್ನು ಆ.ಚ.ಶಿವಣ್ಷ ಅವರಿಗೆ, ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ ಯನ್ನು ಬಿ.ಎಂ.ಹನೀಪ್ ಅವರಿಗೆ ನೀಡಿ ಗೌರವಿಸಲಾಯಿತು.ಹಾಗೆಯೇ ಶಿವಮೊಗ್ಗದವರೇ ಆದ ರಾಮ ಸ್ವಾಮಿಹುಲುಕೋಡು, ರಾಘವೇಂದ್ರ ಮೇಗರವಳ್ಳಿ, ಸುನೀಲ್ ಕುಮಾರ್ ಅವರಿಗೂ ಪ್ರಶಸ್ತಿನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ಶಾಲು ಹೊದಿಸಿ,ಸನ್ಮಾನಿಸಿದ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ಹೆಚ್ಚಿದೆ. ನಿರಂರವಾಗಿ ಅವರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆಂದು ಸ್ಮರಿಸಿದರು.