May 17, 2024

Chitradurga hoysala

Kannada news portal

ಹೆಚ್.ಆಂಜನೇಯ ಅಬ್ಬರದ ಮತ ಪ್ರಚಾರ

1 min read

ಜನಾಶೀರ್ವಾದ ಯಾತ್ರೆ; ಹೆಚ್.ಆಂಜನೇಯ ಅಬ್ಬರದ ಮತ ಪ್ರಚಾರ

ಸಿರಿಗೆರೆ ಜಿ.ಪಂ.ವ್ಯಾಪ್ತಿಯ ಚಿಕ್ಕೆನಹಳ್ಳಿ, ಬೊಮ್ಮವ್ವ ನಾಗ್ತಿಹಳ್ಳಿ ಮತ್ತು ಕೊಣನೂರಿನಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಅಬ್ಬರದ ಮತ ಪ್ರಚಾರ

ಸುಡುವ ಬಿಸಿಲನ್ನು ಲೆಕ್ಕಿಸದೆ ಮಾಜಿ ಸಚಿವ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಅವರ ಬರುವಿಕೆಗಾಗಿ ಕಾದು ನಿಂತಿದ್ದ ಚಿಕ್ಕೆನಹಳ್ಳಿ, ಕೊಣನೂರು ಮತ್ತು ಬೊಮ್ಮವ್ವ ನಾಗ್ತಿಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಮಾಜಿ ಸಚಿವರು ಆಗಮಿಸುತ್ತಲೇ ಹೂಮಳೆ ಸುರಿಸಿ, ಆರತಿ ಎತ್ತಿ ಸ್ವಾಗತಿಸಿದರು.

ಕೆಲವೇ ದಿನಗಳಲ್ಲಿ ರಾಜ್ಯದ ರಾಜಕೀಯ ಭವಿಷ್ಯ ಬರೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಮಾಜಿ ಸಚಿವ ಎವ್.ಆಂಜನೇಯ ಬಿಜೆಪಿ ಶಾಸಕ ಹಾಗೂ ಸರ್ಕಾರದ ಜನ ವಿರೋಧಿ ನಡೆಗಳನ್ನು ಅನಾವರಣ ಮಾಡಿದರು.

ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ಕೊಟ್ಟ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದ್ದು, ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.‌

About The Author

Leave a Reply

Your email address will not be published. Required fields are marked *