ಶಾಲಾ, ಕಾಲೇಜುಗಳ ಹತ್ತಿರ ತಂಬಾಕು ದಾಳಿ
1 min readಶಾಲಾ, ಕಾಲೇಜುಗಳ ಹತ್ತಿರ ತಂಬಾಕು ದಾಳಿ
ಚಿತ್ರದುರ್ಗ,ಸೆಪ್ಟೆಂಬರ್03:
ಜಿಲ್ಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೋಟ್ಪಾ-2003ರ ಕಾಯ್ದೆಯ ಕುರಿತು ಜಿಲ್ಲಾ ಮಟ್ಟದ ತಂಬಾಕು ತನಿಖಾ ತಂಡ ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ, ಇಸಾಮುದ್ರ ಹೊಸಹಟ್ಟಿ, ಸೀಗೆಹಳ್ಳಿ, ಹೊಸರಂಗಾಪುರ ಮತ್ತು ಡಿ. ಮದಕರಿಪುರ ನಗರ ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳ ಹತ್ತಿರದ ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳಿಗೆ ಗುರುವಾರ ದಾಳಿ ನಡೆಸಿ ಒಟ್ಟು 29 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿದೆ.
ತಂಬಾಕು ಮತ್ತು ಕೊರೋನಾ ಕುರಿತು ಸಾರ್ವಜನಿಕರಲ್ಲಿ ಮತ್ತು ಅಂಗಡಿ ಮಾಲೀಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, ಪಾನ್ ಮಸಾಲ, ತಂಬಾಕು ಜಗಿದು ಉಗಿಯದಂತೆ ತಡೆಗಟ್ಟಲು ಜಾಗೃತಿ ಮೂಡಿಸಲಾಯಿತು.
ಕೋಟ್ಪಾ-2003ರ ಕಾಯ್ದೆಯ ಕುರಿತು ಜಾಗೃತಿ ನೀಡಿ, ಸಂಬಂಧಪಟ್ಟ ಸೆಕ್ಷನ್-4, 6ಎ ಮತ್ತು 6ಬಿ ಬೋರ್ಡ್ಗಳನ್ನು ಹಾಕಲು ಸೂಚಿಸಲಾಯಿತು ಮತ್ತು ಸೆಕ್ಷನ್-4 ಅಡಿಯಲ್ಲಿ 11 ಕೇಸುಗಳನ್ನು ದಾಖಲಿಸಿ ರೂ. 1200 ದಂಡವನ್ನು ಮತ್ತು ಸೆಕ್ಷನ್-6ಬಿ ಅಡಿಯಲ್ಲಿ 18 ಕೇಸುಗಳನ್ನು ದಾಖಲಿಸಿ ರೂ. 2200 ದಂಡವನ್ನು ವಸೂಲಿ ಮಾಡಲಾಯಿತು.
ತಂಬಾಕು ದಾಳಿಯಲ್ಲಿ ಜಿಲ್ಲಾ ಮಟ್ಟದ ತನಿಖಾ ತಂಡದ ಅಧಿಕಾರಿಗಳಾದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ. ತಿಪ್ಪೇಸ್ವಾಮಿ, ಸೀಗೆಹಳ್ಳಿ ಶಾಲೆಯ ಶಿಕ್ಷಕಿ ಕೆ.ಆರ್. ನಾರಮ್ಮ, ಸಿರಿಗೆರೆ ಆರ್ಡಿಪಿಆರ್ ಬಿಡಿಎಎ ಎಂ.ಟಿ. ಜಯರಾ, ಪೊಲೀಸ್ ಇಲಾಖೆಯ ಸಿಹೆಚ್ಸಿ ಮಲ್ಲಿಕಾರ್ಜುನ್, ಇಸಾಮುದ್ರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ಮಲ್ಲಪ್ಪ, ಪೊಲೀಸ್ ಇಲಾಖೆಯ ಕೆ. ಈ. ರಫೀಉಲ್ಲಾ, ಬಿ. ಚಂದ್ರಶೇಖರ್, ಸೀಗೆಹಳ್ಳಿ ಹೊಸರಂಗಾಪುರ ಶಾಲೆಯ ಮುಖ್ಯೋಪಾಧ್ಯೆ ಎಂ.ಎನ್. ಶಿವಗಂಗಮ್ಮ, ಸೀಗೆಹಳ್ಳಿ ಹೊಸರಂಗಾಪುರ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಎಸ್. ರುದ್ರೇಶ್ ಇದ್ದರು.