ರಾಜ್ಯದ ಐತಿಹಾಸಿಕ ಗೌರಸಮುದ್ರ ಮಾರಮ್ಮ ಜಾತ್ರೆ ರದ್ದು ಸಾವಿರಾರು ಭಕ್ತರಿಗೆ ನಿರಾಸೆ.
1 min readಚಳ್ಳಕೆರೆ- ಬುಡಕಟ್ಟು ಸೊಗಡನ್ನು ಹೊಂದಿದ, ರಾಜ್ಯದ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದ ಶ್ರೀಮಾರಮ್ಮನ ಜಾತ್ರೆಯನ್ನು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ.
ಇದೇ ತಿಂಗಳ ಆ: 24ರಿಂದ 26ರ ಮೂರು ದಿನಗಳ ಕಾಲ ನಡೆಯಬೇಕಿದ್ದ ಜಾತ್ರೆ ಈ ಬಾರಿ ರದ್ದಾಗುವ ಮೂಲಕ ರಾಜ್ಯದ ಸಾವಿರಾರು ಭಕ್ತರಿಗೆ ನಿರಾಸೆ ಮೂಡಿಸಿದ್ದಾರೆ. ಅಂದು ಕೇವಲ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

