May 5, 2024

Chitradurga hoysala

Kannada news portal

ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಬೇಕು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

1 min read

ಚಿತ್ರದುರ್ಗ: ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಉತ್ತಮವಾದ ರಸ್ತೆ ನಿರ್ಮಾಣ ಮಾಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಜೆಸಿಆರ್ ಬಡಾವಣೆಯ ಗಣೇಶ ದೇವಸ್ಥಾನದ ಬಳಿ ನಗರಸಭೆ ಅನುದಾನದಲ್ಲಿ ವಿ.ಪಿ. ಬಡಾವಣೆ ಮುಖ್ಯ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ-4 ಸರ್ವೀಸ್ ರಸ್ತೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ರಸ್ತೆಗಳ ಅಭಿವೃದ್ಧಿಯಿಂದ ನಗರದ ಅಭಿವೃದ್ಧಿ ಆಗುತ್ತದೆ.ಸಾರ್ವಜನಿಕರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆಗಳನ್ನು ಅಚ್ಚುಕಟ್ಟಾಗಿ ಮಾಡಿದರೆ ಅನುಕೂಲವಾಗುತ್ತದೆ. ಜನರು ಗಮನ ಹರಿಸಿ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಿಸಿಕೊಳ್ಳಿ ಎಂದರು.ನಗರದ ರಸ್ತೆಗಳು ಸುಧಾರಣೆ ಆಗುತ್ತಿವೆ.ಇನ್ನು ತ್ವರಿತಗತಿಯಲ್ಲಿ ಕೆಲಸ ಮಾಡಲು ತಿಳಿಸಿದ್ದೇನೆ ಎಂದು ತಿಳಿಸಿದರು.

. ಡಾ:: ಸಿದ್ದಾರ್ಥ ಗುಂಡಾರ್ಪಿ, ನಗರಸಭಾ ಸದಸ್ಯರಾದ ಚಾಲುಕ್ಯ ನವೀನ್, ರೋಹಿಣಿ ನವೀನ್, ಮಾಜಿ ನಗರಸಭಾ ಸದಸ್ಯರಾದ ಕೃಷ್ಣಪ್ಪ, ಆನಂದ್, ಮುರುಗೇಶ್ ಗೌಡ್ರು, ಸಾಯಿಬಾಬು ರೆಡ್ಡಿ, ಸುಧೀರ್, ನಗರಸಭಾ ಆಯುಕ್ತರಾದ ಹನುಮಂತರಾಜು, ಎಇಇ ಮನೋಹರ್, ಇಂಜಿನಿಯರ್‌ ಕಿರಣ್ ಇದ್ದರು.

ನಗರದ ಐಯುಡಿಪಿ ಬಡಾವಣೆಯ 11 ಕ್ರಾಸ್ ನಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಸಸಿ ನೆಟ್ಟು ಪರಿಸರ ಬೆಳೆಸಬೇಕು ಎಂದು ತಿಳಿಸಿದರು.

About The Author

Leave a Reply

Your email address will not be published. Required fields are marked *